Advertisement

ಲ್ಯಾಪ್‌ಟಾಪ್‌-ಸೋಲಾರ್‌ ದೀಪ ವಿತರಿಸಿದ ಸಿದ್ದರಾಮಯ್ಯ

11:09 AM Jun 05, 2020 | Suhan S |

ಗುಳೇದಗುಡ್ಡ: ಪಟ್ಟಣದ ಹಾದಿಬಸವೇಶ್ವರ ದೇವಸ್ಥಾನ ಹತ್ತಿರ ನಡೆದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುರಸಭೆ 2018-19ನೇ ಸಾಲಿನ ಎಸ್‌ ಎಫ್‌ಸಿ ಶೇ.5ರ ಅನುದಾನದಲ್ಲಿ ವಿಕಲಚೇತನರಿಗೆ ಮೋಟರ್‌ ಸೈಕಲ್‌, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ ಹಾಗೂ 2019-20ನೇ ಸಾಲಿನ ಎಸ್‌ಎಫ್‌ಸಿ ಶೇ.24.10 ಅನುದಾನದಲ್ಲಿ ಪರಿಶಿಷ್ಟ ಜಾತಿ-ಪಂಗಡದ ಬಡ ಕುಟುಂಬಗಳಿಗೆ ಸೋಲಾರ್‌ ದೀಪ ವಿತರಿಸಿದರು.

Advertisement

ನಂತರ ಮಾತನಾಡಿದ ಅವರು, ಎಸ್‌.ಸಿ., ಎಸ್‌.ಟಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿಕಲಚೇತನ ಬಡ ಜನರಿಗೆ ಸರ್ಕಾರ ಸಾಕಷ್ಟು ಉಪಯುಕ್ತ ಯೋಜನೆ ರೂಪಿಸಿದೆ. ಈ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಪುರಸಭೆ ಮುಖ್ಯಾಧಿಕಾರಿ ರವೀಂದ್ರನಾಥ ಅಂಗಡಿ, ಸದಸ್ಯರಾದ ವಂದನಾ ಭಟ್ಟಡ, ಶಿಲ್ಪಾ ಹಳ್ಳಿ, ವಿನೋದ ಮದ್ದಾನಿ, ನಾಗರತ್ನಾ ಲಕ್ಕುಂಡಿ, ಉಮೇಶ ಹುನಗುಂದ, ರಫೀಕ ಕಲಬುರ್ಗಿ, ವಿಠಲ ಕಾವಡೆ, ಸಂತೋಷ ನಾಯನೇಗಲಿ, ಸಂಜಯ ಬರಗುಂಡಿ, ಹೊಳಬಸು ಶೆಟ್ಟರ, ನಾಗಪ್ಪ ಗೌಡರ, ಪ್ರಶಾಂತ ಜವಳಿ, ಮಹಾಂತೇಶ ಲಕ್ಕುಂಡಿ, ಗೋಪಾಲ ಭಟ್ಟಡ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next