Advertisement

ಲಂಕೆ ಹಿಂಸಾಚಾರ ಹಿನ್ನೆಲೆ: ಸಚಿವ ರಣತುಂಗ ಬಂಧನ

08:44 AM Oct 30, 2018 | Team Udayavani |

ಕೊಲೊಂಬೋ: ಶ್ರೀಲಂಕಾದಲ್ಲಿ ಆರಂಭವಾಗಿರುವ ರಾಜಕೀಯ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವ ಲಕ್ಷಣ ಗೋಚರಿಸುತ್ತಿಲ್ಲ. ರವಿವಾರ ನಡೆದ ಹಿಂಸಾಚಾರಕ್ಕೆ ಒಬ್ಬ ಬಲಿಯಾದ ಘಟನೆ ಹಿನ್ನೆಲೆಯಲ್ಲಿ ಸೋಮವಾರ ಶ್ರೀಲಂಕಾದ ಪೆಟ್ರೋಲಿಯಂ ಸಚಿವ, ಮಾಜಿ ಕ್ರಿಕೆಟಿಗ ಅರ್ಜುನ ರಣತುಂಗ ಅವರನ್ನು ಬಂಧಿಸಲಾಗಿದೆ. ರವಿವಾರ ರಣತುಂಗ ಅವರನ್ನು ಅಪಹರಿಸಲು ಪ್ರತಿಭಟನಾಕಾರರು ಯತ್ನಿಸಿದಾಗ ಸಚಿವರ ಅಂಗರಕ್ಷಕರು ಗುಂಡು ಹಾರಿಸಿದ ಪರಿಣಾಮ, ಒಬ್ಬ ಪ್ರತಿಭಟನಾಕಾರ ಸಾವಿಗೀಡಾಗಿದ್ದ. ಇದೇ ವೇಳೆ, ಪ್ರಧಾನಿ ಯಾರು ಎಂಬ ಗೊಂದಲದ ನಡುವೆಯೇ ಮಹಿಂದಾ ರಾಜಪಕ್ಸೆ ಸೋಮವಾರ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸ್ಪೀಕರ್‌ ಅವರು ವಿಕ್ರಮಸಿಂಘೆ ಅವರೇ ಪ್ರಧಾನಿ ಎಂದು ರವಿವಾರ‌ ಘೋಷಿಸಿದ್ದರೂ, ರಾಜಪಕ್ಸೆ ಅಧಿಕಾರ ವಹಿಸಿ ಕೊಂಡಿರುವುದು ಅಚ್ಚರಿ ಮೂಡಿಸಿದೆ. ಈ ನಡುವೆ, ಅಮಾನತಿನಲ್ಲಿಟ್ಟಿರುವ ಸಂಸತ್ತನ್ನು ಪುನಾರಂಭಿಸುವಂತೆ ಶ್ರೀಲಂಕಾಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next