Advertisement

ಭೂಮಾಪಕರಿಗೆ ಹದ್ದು ಬಸ್ತು ಕಡತ ಹಂಚಲು ಮನವಿ

11:47 AM Nov 10, 2021 | Team Udayavani |

ಅಫಜಲಪುರ: ಇಲ್ಲಿನ ಹೈದ್ರಾಬಾದ ಕರ್ನಾಟಕ ಪರವಾನಗಿ ಭೂಮಾಪಕರ ಸಂಘದ ವತಿಯಿಂದ ಪರವಾನಗಿ ಭೂಮಾಪಕರಿಗೆ ಹದ್ದುಬಸ್ತು ಕಡತ ಹಂಚಿಕೆ ಮಾಡುವಂತೆ ಹಾಗೂ ಸರ್ಕಾರಿ ಭೂಮಾಪಕರಿಗೆ 11ಇ ಕಡತ ಹಂಚಿಕೆ ಮಾಡುವಂತೆ ಮನವಿ ಸಲ್ಲಿಸ ಲಾಯಿತು.

Advertisement

ಪರವಾನಗಿ ಭೂಮಾಪಕರ ಸಂಘದ ತಾಲೂಕು ಅಧ್ಯಕ್ಷ ಕಲ್ಲಯ್ಯ ಕೆ. ಮಠ ಮಾತನಾಡಿ, ಆಯುಕ್ತರ ಆದೇಶದಂತೆ ನಮಗೆ ಹದ್ದುಬಸ್ತು ಕಡತಗಳು ಹಂಚಿಕೆಯಾಗಿವೆ. ಸರ್ಕಾರಿ ಭೂಮಾಪಕರಿಗೆ ನಮ್ಮ ಹಕ್ಕಾದ 11ಇ ಕಡತಗಳು ಹಂಚಿಕೆಯಾಗಿವೆ ಎಂದರು.

2002ನೇ ಇಸ್ವಿಯಿಂದ ಇಲ್ಲಿಯ ವರೆಗೆ ಇಲಾಖೆಯಿಂದ ಕಾಲಕಾಲಕ್ಕೆ ಹೊರಡಿಸಿದ ಎಲ್ಲ ಆದೇಶಗಳು ಹಾಗೂ ಸುತ್ತೋಲೆಗಳಂತೆ ಕೆಲಸ ನಿರ್ವಹಿಸುತ್ತಲೇ ಬಂದಿದ್ದೇವೆ. ಅನೇಕ ಬಾರಿ 11ಇ ತತ್ಕಾಲ್‌, ಪೋಡಿ ಅಲಿಗೇಶನ್‌, ಪೋಡಿ ಮುಕ್ತ ಗ್ರಾಮ ಅಭಿಯಾನದ ಸಂಭಾವನೆ ಹಣ ಪಾವತಿಸಬೇಕೆಂದು 11ಇ ಹಾಗೂ ತಕರಾರರು ಕಡತ, ವಿಲೆ ಮಾಡಲಾದ ಕಡತಗಳನ್ನು ಮೌಖೀಕವಾಗಿ ಹಾಗೂ ಪತ್ರದ ಮೂಲಕ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ ಎಂದು ಹೇಳಿದರು.

ಮನವಿ ಪರಿಗಣಿಸಿ ಹದ್ದುಬಸ್ತು ಕಡತಗಳನ್ನು ಹಂಚಿಕೆ ಮಾಡಿದರೆ ಮಾತ್ರ ಅಳತೆ ಮಾಡಿಕೊಡುತ್ತೇವೆ ಎಂದು ಹೇಳಿದರು. ಮುಖಂಡರಾದ ಅನೀಲ ಪಾಗಾ, ಉಮೇಶ ಕುಂಬಾರ, ಮಾಳಪ್ಪ ಇಂಗಳಗಿ, ರಾಜು ಹಸರಗುಂಡಗಿ, ಹರ್ಷ ಕುಲಕರ್ಣಿ, ರಾಘವೇಂದ್ರ ರಾಠೊಡ, ದಾನಯ್ಯ ಹಿರೇಮಠ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next