Advertisement

ಗುಡ್ಡ ಕುಸಿದು ರಸ್ತೆ ಪಕ್ಕ ಬಿದ್ದ ಮಣ್ಣು; ತೆರವಿಗೆ ಕೊನೆಗೂ ಕ್ರಮ

02:50 AM Jul 05, 2018 | Team Udayavani |

ಕಡಬ: ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಪೇಟೆಯಲ್ಲಿರುವ ರೈತ ಸಂಪರ್ಕ ಕೇಂದ್ರದ ಬಳಿ ಗುಡ್ಡ ಕುಸಿತಗೊಂಡು ರಸ್ತೆಯ ಪಕ್ಕ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಲು ಕೊನೆಗೂ ಮುಹೂರ್ತ ಕೂಡಿಬಂದಿದೆ. ಲೋಕೋಪಯೋಗಿ ಇಲಾಖೆಯ ವತಿಯಿಂದ ಸೋಮವಾರ ಮಣ್ಣನ್ನು ತೆರವುಗೊಳಿಸುವ ಕಾರ್ಯ ಆರಂಭಗೊಂಡಿದೆ.

Advertisement

ಮಣ್ಣು ಬಿದ್ದು ಒಂದು ವಾರ ಕಳೆದರೂ ಕುಸಿತವಾದ ಮಣ್ಣನ್ನು ತೆರವು ಮಾಡುವ ಕಾರ್ಯ ನಡೆಸದಿರುವ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶವ್ಯಕ್ತಪಡಿಸಿದ್ದರು. ನಿರಂತರ ಮಳೆ ಸುರಿದ ಹಿನ್ನಲೆಯಲ್ಲಿ ಜೂ.26ರಂದು ಗುಡ್ಡ ಕುಸಿತಗೊಂಡು ಅದರೊಂದಿಗೆ ವಿದ್ಯುತ್‌ ಕಂಬ ಹಾಗೂ ಮರವೊಂದು ಧರೆಗುರುಳಿತ್ತು. ಘಟನೆಯಿಂದಾಗಿ ರಸ್ತೆ ಬದಿಯಲ್ಲಿ ಮಣ್ಣು ರಾಶಿ ಬಿದ್ದು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಪಾದಚಾರಿಗಳಿಗೆ ರಸ್ತೆಯ ಬದಿಯಲ್ಲಿ ನಡೆದಾಡುವುದಕ್ಕೆ ಸಮಸ್ಯೆ ಎದುರಾಗಿತ್ತು. ಮಣ್ಣು ತೆರವುಗೊಳಿಸಿದ ಬಳಿಕ ಈಗಾಗಲೇ ಅಪಾಯದಲ್ಲಿರುವ ವಿದ್ಯುತ್‌ ಕಂಬಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗುವುದು ಎಂದು ಕಡಬ ಮೆಸ್ಕಾಂನ ಅಧಿಕಾರಿ ಸಜಿಕುಮಾರ್‌ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next