Advertisement

ರಮೇಶ ಅಣ್ಣಾ ವಿರುದ್ಧ ಲಕ್ಷ್ಮೀ ಅಕ್ಕ ಗೋಕಾಕದಲ್ಲಿ ಸ್ಪರ್ಧೆ!

12:38 AM Feb 15, 2023 | Team Udayavani |

ವಿಧಾನಸಭೆ ಚುನಾವಣೆ ದಿನಗಳು ಹತ್ತಿರವಾಗುತ್ತಿದ್ದಂತೆ ಅಂತೆ ಕಂತೆಗಳಿಗೆ ರೆಕ್ಕೆ ಪುಕ್ಕ ಬಂದಿದೆ. ಗೋಕಾಕದಲ್ಲಿ ಜಾರಕಿಹೊಳಿ ಕುಟುಂಬ ಸೋಲಿಸಬೇಕು ಎಂಬ ಕಾರಣದಿಂದ ಪಂಚಮಸಾಲಿ ಸಮಾಜದ ಕೆಲ ಮುಖಂಡರು ಜಾರಕಿಹೊಳಿ ಬದ್ಧ ರಾಜಕೀಯ ವೈರಿ ಲಕ್ಷ್ಮೀ ಹೆಬ್ಬಾಳ್‌ಕರ ಹೆಸರನ್ನು ಗೋಕಾಕ ಕ್ಷೇತ್ರದಿಂದ ತೇಲಿಬಿಟ್ಟಿದ್ದಾರೆ.

Advertisement

ಈ ಸುದ್ದಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಬಹಳ ಜೋರಾಗಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಮೇಲಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್‌ಕರ ಸಹ ಆಗಾಗ ಪಕ್ಷದ ಹೈಕಮಾಂಡ್‌ ಹೇಳಿದರೆ ನಾನು ಗೋಕಾಕದಿಂದ ಸ್ಪರ್ಧೆ ಮಾಡಲು ಸಿದ್ಧ ಎಂದು ಹೇಳಿರುವುದು ಇದಕ್ಕೆ ಇಂಬು ನೀಡಿದೆ. ಇದಕ್ಕೆ ಪೂರಕವಾಗಿ ಗೋಕಾಕದ ಪಂಚಮಸಾಲಿ ಮುಖಂಡರು ಕೂಡಲಸಂಗಮ ಪಂಚಮಸಾಲಿ ಸ್ವಾಮೀಜಿ ಅವರನ್ನು ಭೇಟಿಯಾಗಿ ಗೋಕಾಕದಿಂದ ಹೆಬ್ಬಾಳಕರ ಅವರನ್ನು ನಿಲ್ಲಿಸಲು ಆಶೀರ್ವಾದ ಮಾಡುವಂತೆ ಮನವಿ ಮಾಡಿದ್ದಾರೆ. ಅಚ್ಚರಿ ಪಡಬೇಕಾದ ಸಂಗತಿ ಎಂದರೆ ಈ ರೀತಿ ಮನವಿ ಮಾಡಿದವರಲ್ಲಿ ಜೆಡಿಎಸ್‌ ಮುಖಂಡರು ಸೇರಿದ್ದಾರೆ!

ಜತೆಗೆ ಈ ನಾಯಕರು ಗೋಕಾಕದಿಂದ ಚುನಾವಣೆಗೆ ಸ್ಪರ್ಧೆ ಮಾಡುವ ಆಕಾಂಕ್ಷಿಗಳು ಕೂಡ ಹೌದು. ಹೆಬ್ಬಾಳಕರ ಗೋಕಾಕದಿಂದ ಕಾಂಗ್ರೆಸ್‌ ಪಕ್ಷ ಕಣಕ್ಕಿಳಿಸಿದ್ದೇ ಆದರೆ ಆಗ ಜಿಲ್ಲೆಯ ರಾಜಕೀಯ ಚಿತ್ರಣವೇ ಸಂಪೂರ್ಣ ಬದಲಾಗುವುದು ಸುಳ್ಳಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next