Advertisement

Laxman Savadi ಎಲ್ಲೂ ಹೋಗಲ್ಲ: ಸಚಿವ ಮಧು ಬಂಗಾರಪ್ಪ

08:04 PM Jan 26, 2024 | Shreeram Nayak |

ಶಿವಮೊಗ್ಗ:ಶಾಸಕ ಲಕ್ಷ್ಮಣ ಸವದಿ ಅವರೇ ನಾನು ಎಲ್ಲೂ ಹೋಗಲ್ಲ ಎಂದು ಹೇಳಿದ್ದಾರೆ. ನನ್ನ ಮುಂದೆ ಯಾವುದೇ ನಿರ್ಧಾರ ಇಲ್ಲ ಅಂತ ಅವರೇ ಹೇಳಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಪಕ್ಷ ಅವರಿಗೆ ಗೌರವ ಕೊಟ್ಟಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್‌ ಬಗ್ಗೆ ಅವರಿಗೆ ಅಪಾರ ಗೌರವ ಇದೆ. ಅದಕ್ಕೆ ಧನ್ಯವಾದ ಹೇಳುತ್ತೇನೆ ಎಂದರು.

ಬಿಜೆಪಿಯವರೇ ಈ ರೀತಿ ಗೊಂದಲ ಹುಟ್ಟು ಹಾಕಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ಗೆ ಗೌರವ ಕೊಡುವ ಮನಸ್ಸು ಜಗದೀಶ್‌ಶೆಟ್ಟರ್‌ ಅವರಿಗಿದೆ. ಬಂದು ಹೋಗಿರುವ ಬಗ್ಗೆ ಶೆಟ್ಟರ್‌ ಅವರೇ ಹೇಳಬೇಕು. ಅವರು ಹಿರಿಯರಿದ್ದಾರೆ. ಸವದಿ ಅವರ ಬಗ್ಗೆ ತುಂಬಾ ಗೌರವ ಇದೆ. ಅವರೇ ಈಗಾಗಲೇ ತಮ್ಮ ನಿಲುವನ್ನು ತಿಳಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next