Advertisement

ತಿಮ್ಮಕ್ಕ ಉದ್ಯಾನದಲ್ಲಿ ಹಸಿರೇ ಮಾಯ

03:30 PM Mar 14, 2021 | Team Udayavani |

ಕೊಪ್ಪಳ: ತಾಲೂಕಿನ ರುದ್ರಾಪುರ ಬಳಿ ಅರಣ್ಯ ಇಲಾಖೆ ವ್ಯಾಪ್ತಿಯ 300ಎಕರೆಯಲ್ಲಿ ಸಾಲು ಮರದ ತಿಮ್ಮಕ್ಕನ ವೃಕ್ಷ ಉದ್ಯಾನವನದಲ್ಲಿರುವ ಗಿಡಗಳಿಗೆನೀರಿನ ಕೊರತೆ ಎದುರಾಗಿದೆ. ಇರುವಗಿಡಗಳ ರಕ್ಷಣೆಗೆ ಅರಣ್ಯ ಇಲಾಖೆ ಹರಸಾಹಸ ಪಡುವಂತಾಗಿದ್ದು,ಇದರಿಂದಾಗಿ ಪ್ರವಾಸೋದ್ಯಮಕ್ಕೂದೊಡ್ಡ ಪೆಟ್ಟು ಬೀಳುತ್ತಿದೆ. ಕ್ಷೇತ್ರದ ಶಾಸಕ,ಸಂಸದರು ಇಂತಹ ಸಮಸ್ಯೆಗಳಿಗೆ ಸ್ಪಂದನೆಮಾಡುವುದು ತೀರ ಅಗತ್ಯವಾಗಿದೆ.

Advertisement

ಹೌದು.. ಈ ಹಿಂದೆ ಸರ್ಕಾರ ಜಿಲ್ಲೆಗೊಂದು ಉದ್ಯಾನವನ ಎನ್ನುವ ಹೆಸರಿನಡಿ ಅರಣ್ಯ ಇಲಾಖೆ ವ್ಯಾಪ್ತಿಯ ಪ್ರದೇಶದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷಉದ್ಯಾನವನ ಮಾಡಿ ಅರಣ್ಯ ರಕ್ಷಿಸುವ ಉಳಿಸಲು ಮುಂದಾಗಿದೆ. ಜೊತೆಗೆ ಪ್ರವಾಸೋದ್ಯಮವನ್ನು ಉತ್ತೇಜಿಸಲುಉದ್ಯಾನವನವನ್ನು ಅಭಿವೃದ್ಧಿಮಾಡುತ್ತಿದೆ. ಆದರೆ ಜಿಲ್ಲಾ ಕೇಂದ್ರದಿಂದಕೇವಲ 20 ಕಿ.ಮೀ. ದೂರದಲ್ಲಿರುವರುದ್ರಾಪುರ ಬಳಿಯ ತಿಮ್ಮಕ್ಕನ ವೃಕ್ಷಉದ್ಯಾನವನದಲ್ಲಿನ ಗಿಡಗಳ ರಕ್ಷಣೆಮಾಡಿಕೊಳ್ಳುವುದೇ ಅರಣ್ಯ ಇಲಾಖೆಗೆ ಸವಾಲಾಗಿದೆ. ಇಲ್ಲಿ ಬಗೆ ಬಗೆಯಗಿಡಗಳಿವೆ. ಜೊತೆಗೆ ಪ್ರವಾಸೋದ್ಯಮಕ್ಕೆಉತ್ತೇಜನ ನೀಡಲು ಈ ಹಿಂದಿನವರ್ಷದಲ್ಲಿ ಆನೆ, ಜಿಂಕೆ, ಮೊಲ, ಕರಡಿ,ನವಿಲು, ಮೊಸುಳೆ ಸೇರಿದಂತೆ ಇತರೆಪ್ರಾಣಿಗಳ ಆಕೃತಿಗಳನ್ನು ಇರಿಸಿ ಪಾರ್ಕ್‌ ನ್ನು ಇನ್ನಷ್ಟು ಸುಂದರಗೊಳಿಸಲಾಗಿದೆ. ಜಿಲ್ಲೆಯ ಜನರು ಶನಿವಾರ,ರವಿವಾರ ಹಾಗೂ ರಜಾ ದಿನದಲ್ಲಿ ಈ ವೃಕ್ಷ ಉದ್ಯಾನವನ್ನಕ್ಕೆ ಭೇಟಿ ನೀಡಿ ಕುಟುಂಬದೊಂದಿಗೆ ಸಂತಸದ ಕ್ಷಣ ಕಳೆದು ಸಂಜೆ ಮನೆಗೆ ಮರಳುತ್ತಾರೆ.

ಎಲ್ಲರಿಗೂ ನೆಚ್ಚಿನ ತಾಣವಾಗಿರುವ ಹಾಗೂ ಮನಸ್ಸಿಗೆ ಮುದ ನೀಡುವಈ ಪಾರ್ಕ್‌ನಲ್ಲಿ ನೀರಿನ ದೊಡ್ಡ ಸಮಸ್ಯೆಯಾಗಿದೆ. ಗಿಡಗಳನ್ನು ರಕ್ಷಣೆಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಅರಣ್ಯ ಇಲಾಖೆ ಈಗಾಗಲೇ ಎರಡುಬೋರ್‌ವೆಲ್‌ ಕೊರೆಯಿಸಿದ್ದರೂ ನೀರುಬಂದಿಲ್ಲ. ಇರುವ ಒಂದು ಬೋರ್‌ವೆಲ್‌ಮೂಲಕವೇ ಸಣ್ಣ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಇದರಿಂದ ಗಿಡಗಳ ರಕ್ಷಣೆ ನಡೆದಿದೆ. ಬರುವ ಜನರಿಗೆ ಕುಡಿಯುವನೀರಿನ ವ್ಯವಸ್ಥೆಯಿಲ್ಲ. ಬೋರ್‌ವೆಲ್‌ಕೊರೆಸಿದರೂ ತಳಭಾಗದಲ್ಲಿ ಕಲ್ಲುಬರುತ್ತಿರುವುದರಿಂದ ಪಾರ್ಕ್‌ ಅಭಿವೃದ್ಧಿಗೆ ತೊಂದರೆ ಎದುರಾಗುತ್ತಿದೆ.

ಪ್ರತಿ ಬೇಸಿಗೆಯಲ್ಲೂ ನೀರಿಲ್ಲದೇ ಹಲವು ಗಿಡಗಳು ಒಣಗುತ್ತಿವೆ. ಹಾಗಾಗಿಅರಣ್ಯ ಇಲಾಖೆ ಕೆಲವೊಮ್ಮೆ ಟ್ಯಾಂಕರ್‌ಮೂಲಕವೂ ನೀರು ಪೂರೈಸಿ ಸಸಿಗಳ ಜೀವ ಉಳಿಸುವ ಕೆಲಸ ಮಾಡುತ್ತಿದೆ. ಆದರೆಇಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಹಿಂದೆ ಆರ್‌. ಶಂಕರ್‌ ಅವರು ಅರಣ್ಯಖಾತೆ ಸಚಿವರಾಗಿದ್ದ ವೇಳೆ ಉದ್ಯಾನವನಕ್ಕೆ ಭೇಟಿ ನೀಡಿ ತುಂಗಭದ್ರಾ ಜಲಾಶಯದಮೂಲಕ ಈ ಪಾರ್ಕ್‌ಗೆ ನೀರು ತಂದುಉದ್ಯಾನವನ ಅಭಿವೃದ್ಧಿ ಮಾಡುವಕುರಿತು ಪ್ರಸ್ತಾಪ ಮಾಡಿದ್ದರು. ಆದರೆಬದಲಾದ ಸರ್ಕಾರದಿಂದ ಎಲ್ಲವೂ ನಿಂತು ಹೋಗಿದೆ.

ಪ್ರವಾಸೋದ್ಯಮಕ್ಕೂ ಪೆಟ್ಟು: ರಾಷ್ಟ್ರೀಯಹೆದ್ದಾರಿ-63 ರಸ್ತೆ ಪಕ್ಕದಲ್ಲೇ ಇರುವ ಈಪಾರ್ಕ್‌ ಜಿಲ್ಲೆಯ ಪ್ರವಾಸಿ ತಾಣವಾಗಿದೆ.ಜೊತೆಗೆ ನಿತ್ಯವೂ ನೂರಾರು ಜನರುಪಾರ್ಕ್‌ಗೆ ಭೇಟಿ ನೀಡುತ್ತಿದ್ದಾರೆ.ಅವರಿಗೆ ಹಸಿರುಮಯ ವಾತಾವರಣ ಕಾಣಲು ನೀರಿನ ಕೊರತೆ ಎದುರಾಗಿದೆ.ಹಾಗಾಗಿ ಪಾರ್ಕ್‌ನ್ನು ಸೌಂದರ್ಯ ಮಯವಾಗಿಡಲು ಸಾಧ್ಯವಾಗಿಲ್ಲ.ಇದರಿಂದ ಪ್ರವಾಸೋದ್ಯಮಕ್ಕೂಪೆಟ್ಟು ಬೀಳುತ್ತಿದೆ. ಸರ್ಕಾರಹಾಗೂ ಜಿಲ್ಲಾಡಳಿತವು ಇತ್ತ ಕಾಳಜಿ ವಹಿಸಬೇಕಿದೆ.

Advertisement

ಶಾಸಕ-ಸಂಸದರೇ ಸಮಸ್ಯೆ ಪಾರ್ಕ್‌ ಗಮನಿಸಿ :

ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ಸಂಗಣ್ಣ ಕರಡಿ ಅವರು ಜಿಲ್ಲೆಯ ಸಾಲು ಮರದ ತಿಮ್ಮಕ್ಕ ಪಾರ್ಕ್‌ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಇಲ್ಲಿ ಜನರಿಗಿಂತ ಗಿಡಮರಗಳಿಗೆ ನೀರಿನ ಸಮಸ್ಯೆ ಹೆಚ್ಚಿದ್ದು, ಇದರ ನಿವಾರಣೆಗೆ ತುಂಗಭದ್ರಾ ಡ್ಯಾಂನಿಂದ ಇಲ್ಲವೇ, ಇತರೆ ಜಲ ಮೂಲಗಳಿಂದಲಾದ್ರೂ ಶಾಶ್ವತ ನೀರಿನ ವ್ಯವಸ್ಥೆ ಮಾಡಬೇಕಿದೆ. ಇಲ್ಲದಿದ್ದರೆಮುಂದಿನ ದಿನಗಳಲ್ಲಿ ಹೆಸರಿಗಷ್ಟೇ ತಿಮ್ಮಕ್ಕ ಪಾರ್ಕ್‌, ಅಲ್ಲಿ ಏನೂ ಇಲ್ಲ ಎನ್ನುವಅಪಕೀರ್ತಿ ಎದುರಾಗುವ ಸಾಧ್ಯತೆ ಹೆಚ್ಚಿದೆ. ಜನಪ್ರತಿನಿ ಧಿಗಳು ವಿಶೇಷ ಯೋಜನೆರೂಪಿಸಿ, ನೀರಿನ ವ್ಯವಸ್ಥೆ ಮಾಡಿದರೆ ಜಿಲ್ಲೆಗೊಂದು ಮಾದರಿ ಉದ್ಯಾನವನವಾಗಿ ಮಾರ್ಪಡುವಲ್ಲಿ ಎರಡು ಮಾತಿಲ್ಲ.

ತಿಮ್ಮಕ್ಕನ ಪಾರ್ಕ್‌ನಲ್ಲಿ ಎರಡು ಬೋರ್‌ವೆಲ್‌ ಕೊರೆಯಿಸಿದ್ದೇವೆ. ಆದರೆನೀರು ಬಂದಿಲ್ಲ. ನಮಗೆ ಅಲ್ಲಿ ಜಲ ಮೂಲದ್ದೇ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆಗೆ ಸಭೆಯನ್ನೂ ನಡೆಸಿ ಚರ್ಚಿಸಿದ್ದೇವೆ. ಜೊತೆಗೆ ಡಿಸಿ ಅವರೊಂದಿಗೂ ಸಮಾಲೋಚಿಸಿದ್ದೇವೆ. ಕಲ್ಯಾಣ ಕರ್ನಾಟಕ ಮಂಡಳಿಅನುದಾನದಲ್ಲಿ ಪಾರ್ಕ್‌ ಅಭಿವೃದ್ಧಿಗೆ ವಿಶೇಷ ಯೋಜನೆಯನ್ನೂ ರೂಪಿಸಿ ಪ್ರಸ್ತಾವನೆ ಸಲ್ಲಿಸಿದ್ದೇವೆ. -ಹರ್ಷಬಾನು, ಡಿಎಫ್‌ಒ, ಕೊಪ್ಪಳ

 

­ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next