Advertisement

ಕೆವಿಜಿ ಅಧಿಕಾರಿ ವರ್ಗಾವಣೆ ರದ್ದತಿಗೆ ಮನವಿ

07:48 PM Apr 23, 2021 | Team Udayavani |

ಅಡಹಳ್ಳಿ: ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಶಾಖೆಯ ಫೀಲ್ಡ್‌ ಆಫೀಸರ್‌ ಪಿ. ಸತೀಶ ವರ್ಗಾವಣೆ ರದ್ದು ಪಡಿಸಿ ಪುನಃ ಇದೇ ಶಾಖೆಯಲ್ಲಿ ಮುಂದುವರೆಸಬೇಕು ಎಂದು ಆಗ್ರಹಿಸಿ ಮ್ಯಾನೇಜರ್‌ ವಿಜಯ ಕೇಡಕರ್‌ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

Advertisement

ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯವಿಟ್ಟುಕೊಂಡು ಬ್ಯಾಂಕಿನ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ತಮಗೆ ತಿಳಿದಿರುವಂತೆ 66 ಶಾಖೆಗಳಲ್ಲಿಯೇ ಅತಿಹೆಚ್ಚು ಕಟಬಾಕಿ ಸಾಲ ವಸೂಲಾತಿ ಮಾಡಿ ಪ್ರಥಮ ಸ್ಥಾನ ಪಡೆದಿದ್ದಾರೆ, ಹೀಗಾಗಿ ಕನಿಷ್ಠ ಇನ್ನೂ ಒಂದು ವರ್ಷವಾದರೂ ಈ ಗ್ರಾಮದಲ್ಲಿಯೇ ಮುಂದುವರೆಯುವಂತೆ ಆದೇಶ ಮಾಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

3 ವರ್ಷಗಳಲ್ಲಿ ಗಣನೀಯ ಸಾಧನೆ ಮಾಡಿದ ಸತೀಶರ ವರ್ಗಾವಣೆ ರದ್ದು ಮಾಡದಿದ್ದರೆ ಬ್ಯಾಂಕಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ಈ ವೇಳೆ ಎಪಿಎಂಸಿ ನಿರ್ದೇಶಕ ಅಡಿವೆಪ್ಪಾ ಕೆಂಚಣ್ಣವರ, ಗ್ರಾಪಂ ಮಾಜಿ ಅಧ್ಯಕ್ಷ ಈರಗೌಡ ಪಾಟೀಲ, ಸಿದ್ಧು ಕೆಂಚಣ್ಣವರ, ಬಸವಂತ ಕಳ್ಳಿ, ಗಂಗಪ್ಪ ಖೋತ, ದಾನಯ್ಯ ಮಠಪತಿ, ಲಕ್ಷ್ಮಣ ಸಾತಣ್ಣವರ, ಶಿವಾಜಿ ಡಂಬಳಕರ, ಕಲಗೌಡ ಪಾಟೀಲ, ಸೋಮನಿಂಗ ಗುಡ್ಡಾಪುರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next