Advertisement

ಹಂಚಿ ಉಣ್ಣುವುದು ಶರಣ ಸಂಸ್ಕೃತಿ

10:45 AM Mar 23, 2019 | |

ಕುಷ್ಟಗಿ: ಕರೆದುಕೊಂಡು, ಹಂಚಿಕೊಂಡು ಉಣ್ಣುವುದರಿಂದ ಆರೋಗ್ಯ ಪ್ರಾಪ್ತಿಯಾಗಲಿದ್ದು, ಕದ ಹಾಕಿಕೊಂಡು ಉಣ್ಣುವುದರಿಂದ ಆರೋಗ್ಯ ದೂರವಾಗಲಿದೆ. ತಳವಗೇರಾದಲ್ಲಿ ಆಚರಿಸಿಕೊಂಡು ಬಂದಿರುವ ಈ ಬೆಳದಿಂಗಳ ಬುತ್ತಿ ಜಾತ್ರೆಯ ಸಂಪ್ರದಾಯ ಈಗಾಗಲೇ ಕರೆದುಕೊಂಡು ಉಣ್ಣುವ ಸಂಸ್ಕೃತಿ ಶರಣ ಸಂಸ್ಕೃತಿ ಎಂಬುದು ನಿರೂಪಿಸಿದೆ ಎಂದು ಬಾಳೆಹೊಸೂರು ದಿಂಗಾಲೇಶ್ವರಮಠದ ಶ್ರೀ ದಿಂಗಾಲೇಶ್ವರ ಶ್ರೀಗಳು ಹೇಳಿದರು.

Advertisement

ಇಲ್ಲಿನ ಆದರ್ಶ ಮಹಾವಿದ್ಯಾಲಯ ಮೈದಾನದಲ್ಲಿ ನಡೆದ ಭಾವೈಕ್ಯತೆ ಬೆಸೆಯುವ ಬೆಳದಿಂಗಳ ಬುತ್ತಿ ಜಾತ್ರೆಯಲ್ಲಿ ಅವರು ಆಶೀರ್ವಚನ ನೀಡಿದರು. ದೇಹದ ತೃಪ್ತಿಗಾಗಿ ವಿವಿಧ ತರಹದ ಅಡುಗೆಗಳಿರಬಹುದು, ಆದರೆ ಮನಸ್ಸಿನ ತೃಪ್ತಿಗಾಗಿ ಈ ರೀತಿಯಾಗಿ ಊಟ ಮಾಡುವವರು. ಮನೆಯಲ್ಲಿ ವಿವಿಧ ತರಹದ ಅಡುಗೆ ಮಾಡಿ ತಾವು ಮಾಡಿದ್ದನ್ನು ಕದ ಹಾಕಿಕೊಂಡು ಕೀಳು ಮಟ್ಟದ ಭಾವನೆಯಲ್ಲಿ ಊಟ ಮಾಡುವುದು ದೇಹದ ತೃಪ್ತಿಯಾಗಿದೆ. ಇದರಿಂದ ದೇಹ ಬಲಿಷ್ಠವಾಗುತ್ತಿದೆ, ಮನಸ್ಸು ದುರ್ಬಲವಾಗುತ್ತಿದೆ. ಅದೇ ರೀತಿ ಕದ ಹಾಕಿಕೊಳ್ಳದೇ ಕರೆದುಕೊಂಡು, ಹಂಚಿಕೊಂಡು, ಮಾತನಾಡಿಕೊಂಡು ಉಣ್ಣುವುದು ಮನಸ್ಸಿನ ತೃಪ್ತಿಗಾಗಿ ಎಂದರು.

ಅನ್ನ, ನೀರು, ಗಾಳಿ ಜಗತ್ತಿನಲ್ಲಿರುವ ಮೂರೇ ಮೂರು ಒಳ್ಳೆಯ ರತ್ನಗಳು. ಯಾವುದೇ ಕಾರಣಕ್ಕೂ ತಿನ್ನುವ ಅನ್ನ, ಕುಡಿಯುವ ನೀರು, ಉಸಿರಾಡುವ ಗಾಳಿಯನ್ನು ಕೆಡಿಸಬಾರದು. ಯಾವುದೇ ಕಾರಣಕ್ಕೂ ತಟ್ಟೆಯಲ್ಲಿರುವ ಒಂದು ಅಗುಳು ಕೆಡಿಸದಂತೆ ಸಂಕಲ್ಪಿಸಬೇಕಿದೆ. ಅನ್ನದ ಅಗಳು ಭೂಮಿಯಲ್ಲಿ ಬೆಳೆಯಲು ಆರು ತಿಂಗಳು ಕಷ್ಟಪಡಬೇಕು. ಅದೇ ಬೆಳೆದ ಅನ್ನವಾದ ಅಗಳು ಕೆಡಿಸಲು 6 ಸೆಕೆಂಡ್‌ ಸಾಕು. ಹೀಗಾಗಿ ಯಾವುದೇ ಕಾರಣಕ್ಕೂ ತಿನ್ನುವ ಅನ್ನವನ್ನು ಕೆಡಿಸುವುದಿಲ್ಲ ಎನ್ನುವ ಸಂಕಲ್ಪ ಇಂದು ಮಾಡಬೇಕಿದೆ. ತಿನ್ನುವ ಅನ್ನ ಸಾಕಷ್ಟಿದ್ದರೂ ಚೆಲ್ಲುವುದೇ ಬಹಳವಾಗುತ್ತಿದೆ.
ದೇಶಕ್ಕೆ ಬರಗಾಲ ಅನ್ನ ಕೊರತೆಯಿಂದ ಅಲ್ಲ ಚೆಲ್ಲುವುದರಿಂದ ಎಂದು ದಿಂಗಾಲೇಶ್ವರ ಶ್ರೀಗಳ ಕಳವಳ ವ್ಯಕ್ತಪಡಿಸಿದರು.

ಮೂವತ್ತನೇ ವರ್ಷಕ್ಕೆ 3 ಹೊತ್ತು, 60ನೇ ವರ್ಷಕ್ಕೆ 2 ಹೊತ್ತು, 60ರ ನಂತರ ಒಂದು ಹೊತ್ತು, 90ರ ನಂತರ ಹಣ್ಣಿನ ರಸ ಸೇವಿಸಬೇಕೆಂದು ಆರೋಗ್ಯ ಸೂತ್ರ ಹೇಳುತ್ತದೆ ಎಂದರು.

ಇದೇ ವೇಳೆ ಶರಣಬಸವೇಶ್ವರ ಜಾತ್ರೋತ್ಸವ ಸಮಿತಿಯಿಂದ ದಿಂಗಾಲೇಶ್ವರ ಶ್ರೀಗಳನ್ನು ಸನ್ಮಾನಿಸಿದರು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಜಿಪಂ ಸದಸ್ಯ ಕೆ. ಮಹೇಶ ಇತರರು ಭಾಗವಹಿಸಿದ್ದರು.

Advertisement

ಬೆಳದಿಂಗಳ ಬೆಳಕಲ್ಲಿ ಭೋಜನ
ಈ ಬುತ್ತಿ ಜಾತ್ರೆಯಲ್ಲಿ ತಳವಗೇರಾ, ತೋಪಲಕಟ್ಟಿಯ ಭಕ್ತರು ಬುತ್ತಿಗಂಟಿನೊಂದಿಗೆ ಮೆರವಣಿಗೆಯಲ್ಲಿ ಶರಣಬಸವೇಶ್ವರ ಸನ್ನಿಧಿ ಗೆ ಆಗಮಿಸಿದರು. ಅಲ್ಲಿಂದ ಬುತ್ತಿ ಜಾತ್ರೆ ನಡೆಯುವ ಬಯಲು ಸ್ಥಳದಲ್ಲಿ ಬೆಳದಿಂಗಳ ಬೆಳಕಿನಲ್ಲಿ ಎಲ್ಲರೂ ಸೇರಿ ಶರಣಬಸವೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿದರು. ಬಳಿಕ ಜಂಗಮ ಗಣಾರಾಧನೆ ನಂತರ ತಾವು ತಂದಿರುವ ಬುತ್ತಿಯನ್ನು ಸವಿದರು. ಊಟ ಮಾಡುವಾಗಿನ ಮನಸ್ಸಿನ ಪರಿಣಾಮದಂತೆ ರಕ್ತ ಉತ್ಪತ್ತಿಯಾಗುತ್ತಿದೆ. ಪ್ರತಿಯೊಬ್ಬರೂ ಊಟವನ್ನು ಸಮಾಧಾನದಿಂದ ಮಾಡುವುದನ್ನು ರೂಢಿಸಿಕೊಳ್ಳಬೇಕು.
ಶ್ರೀ ದಿಂಗಾಲೇಶ್ವರ ಸ್ವಾಮೀಜಿ,
ದಿಂಗಾಲೇಶ್ವರಮಠ ಬಾಲೆಹೊಸೂರು

ಊಟ ಮಾಡುವಾಗಿನ ಮನಸ್ಸಿನ ಪರಿಣಾಮದಂತೆ ರಕ್ತ ಉತ್ಪತ್ತಿಯಾಗುತ್ತಿದೆ. ಪ್ರತಿಯೊಬ್ಬರೂ ಊಟವನ್ನು ಸಮಾಧಾನದಿಂದ ಮಾಡುವುದನ್ನು ರೂಢಿಸಿಕೊಳ್ಳಬೇಕು.
 ಶ್ರೀ ದಿಂಗಾಲೇಶ್ವರ ಸ್ವಾಮೀಜಿ,
 ದಿಂಗಾಲೇಶ್ವರಮಠ ಬಾಲೆಹೊಸೂರು

Advertisement

Udayavani is now on Telegram. Click here to join our channel and stay updated with the latest news.

Next