Advertisement

ಕುಷ್ಟಗಿ : ತಾಲೂಕಿನ 23 ಕೆರೆಗಳನ್ನು ಅಮೃತ ಸರೋವರವಾಗಿ ರೂಪಿಸಲು ಯೋಜನೆ

06:32 PM Jul 12, 2022 | Team Udayavani |

ಕುಷ್ಟಗಿ : ಅಮೃತ ಮಹೋತ್ಸವ ಪ್ರಯುಕ್ತ ತಾಲೂಕಿನ 23 ಕೆರೆಗಳನ್ನು ಅಮೃತ ಸರೋವರವಾಗಿ ರೂಪಿಸಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ಆಗಸ್ಟ್ ಸ್ವಾತಂತ್ರ್ಯ ಮಹೋತ್ಸವದ ವೇಳೆಗೆ ಆದ್ಯತೆಯಾಗಿ ತಾಲೂಕಿನ ಕಾಟಾಪೂರ ಕೆರೆ, ಅಂಟರಠಾಣದ ಯಲ್ಲಮ್ಮನ ಕೆರೆ, ಮುದೇನೂರು ಗ್ರಾ.ಪಂ.ನ ಮಾದಾಪೂರ ಕೆರೆ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ.

Advertisement

ಅಮೃತ ಸರೋವರ ಯೋಜನೆ ಪ್ರಧಾನಿ ನರೇಂದ್ರ ‌ಮೋದಿ ಅವರ ಕನಸಿನ ಯೋಜನೆ. 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ 75 ಕೆರೆಗಳನ್ನು ಅಮೃತ ಸರೋವರಗಳನ್ನಾಗಿ ರೂಪಿಸುವುದು ಈ ಯೋಜನೆ ಉದ್ದೇಶವಾಗಿದೆ. ಕೊಪ್ಪಳ ಜಿಲ್ಲೆಯ 75 ಕೆರೆಗಳ ಪೈಕಿ ಕುಷ್ಟಗಿ ತಾಲೂಕಿನಲ್ಲಿ 23 ಕೆರೆ ಅಭಿವೃದ್ಧಿ ಪಡಿಸುವ ಸ್ಪಷ್ಟ ಗುರಿ ಹೊಂದಲಾಗಿದೆ.

ಸದರಿ ಪ್ರದೇಶದಲ್ಲಿ ಕಾಮಗಾರಿ ಭರದಿಂದ ಸಾಗಿದ್ದು ಕಾಮಗಾರಿ ಸ್ಥಳಕ್ಕೆ ಸಿಎಓ ಅಮೀನ್ ಅತ್ತಾರ ಭೇಟಿ ನೀಡಿ ಪರಿಶೀಲಿಸಿ, ಕಾಮಗಾರಿಯ ಬಗ್ಗೆ ಮಾಹಿತಿ ಪಡೆದರು.

ಅಮೃತ ಸರೋವರ ಯೋಜನೆಯ ಉದ್ದೇಶದಂತೆ ಗ್ರಾಮೀಣ ಪ್ರದೇಶದಲ್ಲಿ ಸುಂದರವಾದ ಕೆರೆಗಳು ನಿರ್ಮಾಣವಾಗಬೇಕು.ವಿಶ್ರಾಂತಿ ಪಡೆಯುವ ಬೆಂಚ್‌ ಗಳು, ವಾಕಿಂಗ್‌ ಟ್ರ್ಯಾಕ್‌, ಐಲ್ಯಾಂಡ್‌, ಸುತ್ತಲೂ ತಂತಿ ಬೇಲಿ ಹಾಕಿ ಆಕರ್ಷಣೀಯ ಕೇಂದ್ರಗಳಾಗಿ ಕಾಣುವಂತೆ ನಿರ್ಮಿಸಬೇಕೆಂದು ಹಾಜರಿದ್ದ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕುಡಿಯುವ ನೀರು ಸದ್ಭಳಕೆಯಾಗುವ ಕೆರೆಗಳಿಗೆ ಹೆಚ್ಚಿನ ಒತ್ತುಕೊಟ್ಟು ಕೆರೆಗಳಿಗೆ ಹೆಚ್ಚಿನ ಒತ್ತುಕೊಟ್ಟು ಕೆರೆಗಳ ನಿರ್ಮಿಸಬೇಕು. ಪ್ರವಾಸಿಗರನ್ನು ಕೈಬೀಸಿ ಕರೆಯುವಂತೆ ಕೆರೆಗಳು ತಾಲೂಕಿನಲ್ಲಿ ನಿರ್ಮಾಣವಾಗಬೇಕೆಂದು ಸೂಚಿಸಿದರು. ಪರಿಸರ ಸಂರಕ್ಷಣೆಗೆ ಜತೆಗೆ ಪ್ರಾಣಿ- ಪಕ್ಷಿ, ಜಾನುವಾರುಗಳು ಹಾಗು ಜನರಿಗೆ ನೀರು ಕುಡಿಯಲು ಅನುಕೂಲವಾಗಲಿದೆ ಎಂದರು.

ಇದನ್ನೂ ಓದಿ : ಕಾಫಿನಾಡಿನಲ್ಲಿ ಮಳೆ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ; ತುಂಬಿ ಹರಿಯುತ್ತಿರುವ ನದಿಗಳು

Advertisement

ತಾಂತ್ರಿಕ ಸಹಾಯಕರು ಹಾಗು ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಮುತುವರ್ಜಿ ವಹಿಸಿ ವಿವಿಧ ಇಲಾಖೆಗಳ ಅನುದಾನದ ಸಹಯೋಗದಲ್ಲಿ ಪರಿಣಾಮಕಾರಿಯಾಗಿ ಸರೋವರ ಕೆರೆಗಳನ್ನು ಅನುಷ್ಠಾನಗೊಳಿಸಿ ಕೆರೆಯ ಸೌಂದರ್ಯವನ್ನು ಹೆಚ್ಚಿಸಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಕಾಟಾಪುರ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಹರೀಶ್‌ ಎಂ, ಅಂಠರಠಾಣ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಹನಮಂತಪ್ಪ ನಿಂಬಾಕ್ಷಿ ಶಿವಪ್ಪ ಛಲವಾದಿ, ಸದಸ್ಯರಾದ ಹನಮಗೌಡ ಪೋಲಿಸ್‌ ಪಾಟೀಲ್ ಹಾಜರಿದ್ದರು.

ಅಮೃತ ಸರೋವರ ಯೋಜನೆ
ಅಂಟರಠಾಣ ಕೆರೆ ಸರ್ವೆ ನಂಬರಿನಲ್ಲಿದ್ದು, ಸದ್ಯ ಕೆರೆಯ ಅಭಿವೃದ್ಧಿ ಪೆಂಡಿಂಗ್ ಇದೆ. ಹೀಗಾಗಿ ಬದಲಿ ಕೆರೆಯನ್ನು ಅಭಿವೃದ್ಧಿ ಪಡಿಸಲು ನಿರ್ದೇಶನ ನೀಡಲಾಗಿದೆ. ಅಗಸ್ಟ್ 15 ರ ಹೊತ್ತಿಗೆ ತಾಲೂಕಿನಲ್ಲಿ ಮೂರು ಕೆರೆಗಳನ್ನು ಅಭಿವೃದ್ಧಿಗೊಳಿಸಲು ಉದ್ದೇಶಿಸಲಾಗಿದೆ.
– ಅಮೀನ್ ಅತ್ತಾರ ಸಿಎಓ ಜಿ.ಪಂ.ಕೊಪ್ಪಳ

 

Advertisement

Udayavani is now on Telegram. Click here to join our channel and stay updated with the latest news.

Next