Advertisement

Kustagi: ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿದು ಕಣ್ಣು ಕಳೆದುಕೊಂಡ ವ್ಯಕ್ತಿ

10:13 PM Sep 11, 2024 | Team Udayavani |

ಕುಷ್ಟಗಿ: ಶಾಂತಿಯುತವಾಗಿ ಸಾಗಿದ್ದ ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿದು ವ್ಯಕ್ತಿಯೋರ್ವ ಕಣ್ಣು ಕಳೆದುಕೊಂಡ ಅವಘಡ ಸಂಭವಿಸಿದೆ.

Advertisement

ಇಲ್ಲಿನ ಬುತ್ತಿ ಬಸವೇಶ್ವರ ನಗರದ ವಿಜಯ ವೃಂಧ ಗಣೇಶ ಮೂರ್ತಿ ವಿಸರ್ಜನೆ ಸಂಧರ್ಭದಲ್ಲಿ ಮಾರುತಿ ವೃತ್ತದಲ್ಲಿ ರಾಕೇಟ್ ಪಟಾಕಿ ಸಿಡಿಯುವುದನ್ನು ಬಗ್ಗಿ ನೋಡುವ ವೇಳೆ ರಾಕೇಟ್ ಮುಖಕ್ಕೆ ಬಡಿದು ಗಂಭೀರ ಗಾಯಗೊಂಡಿದ್ದಾನೆ. ಗಾಯಗೊಂಡ ವ್ಯಕ್ತಿಯನ್ನು ಮಾರುತಿ ನಗರದ 25 ವರ್ಷದ ಕಲ್ಲೇಶ ಅಂಬಣ್ಣ ಸುಲೇಖಿ ಎಂದು ಗುರುತಿಸಲಾಗಿದೆ.

ಕೂಡಲೇ ಗಾಯಾಳು ಕಲ್ಲೇಶನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಲ್ಲೇಶನ ಎಡಗಣ್ಣಿಗೆ ಭಾರಿ ಹಾನಿಯಾಗಿದೆ, ಈತನ ಕಣ್ಣಿನ ದೃಷ್ಟಿ ಸಂಪೂರ್ಣ ಹೋಗಿದೆ ಈ ಪ್ರಕರಣದ ಹಿನ್ನೆಲೆಯಲ್ಲಿ ಆಯೋಜಕರು ಸದರಿ ವಿಸರ್ಜನಾ ಮೆರವಣಿಗೆಯ ಡಿಜೆ ಸ್ಥಗಿತಗೊಳಿಸಿದ್ದಾರೆ.

ಇದನ್ನೂ ಓದಿ: Bidar: ಸಾಲ‌ ಬಾಧೆ… ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವೈದ್ಯ, ಕಾಡಿನಲ್ಲಿ ದೇಹ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next