Advertisement

ಕೊಡಗು ಸಂತ್ರಸ್ತರ ನೆರವಿಗೆ ಕುರುಕ್ಷೇತ್ರ ವಿಶೇಷ ಪ್ರದರ್ಶನ

11:28 AM Nov 18, 2018 | Team Udayavani |

ಕನ್ನಡದಲ್ಲಿ ಬಹುಕೋಟಿ ವೆಚ್ಚದ ಬಹುತಾರಾಗಣದಲ್ಲಿ ತಯಾರಾಗುತ್ತಿರುವ ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರ ಯಾವಾಗ ಬಿಡುಗಡೆಯಾಗಬಹುದು ಎಂದು ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಕಾದು ಕುಳಿತಿದ್ದ ಚಿತ್ರ ಪ್ರೇಮಿಗಳಿಗೆ ಕಡೆಗೂ ಚಿತ್ರದ ನಿರ್ಮಾಪಕ ಮುನಿರತ್ನ ಒಂದು ಸಿಹಿಸುದ್ದಿಯನ್ನು ನೀಡಿದ್ದಾರೆ.

Advertisement

ಸದ್ಯ ಪೋಸ್ಟ್‌ ಪ್ರೊಡಕ್ಷನ್‌ನ ಅಂತಿಮ ಹಂತದ ಕೆಲಸಗಳಲ್ಲಿರುವ ಕುರುಕ್ಷೇತ್ರ ಚಿತ್ರವನ್ನು ಶೀಘ್ರದಲ್ಲಿಯೇ ವೀಕ್ಷಿಸಲಿರುವ ಮುನಿರತ್ನ ಬಳಿಕ ಚಿತ್ರವನ್ನು ಜನವರಿ ತಿಂಗಳಿನಲ್ಲಿ ಪ್ರೇಕ್ಷಕರ ಮುಂದೆ ತರುವ ಘೋಷಣೆ ಮಾಡಿದ್ದಾರೆ. 

ಇನ್ನು ಪ್ರಪಂಚದಾದ್ಯಂತ ಕುರುಕ್ಷೇತ್ರ ಚಿತ್ರವನ್ನು ಬಿಡುಗಡೆ ಮಾಡಲು ನಿರ್ದರಿಸಿರುವ ಮುನಿರತ್ನ, ಚಿತ್ರದ ಬಿಡುಗಡೆಗೋ ಒಂದು ದಿನ ಮೊದಲೇ ಅಭಿಮಾನಿಗಳಿಗೆ ವಿಶೇಷ ಪ್ರದರ್ಶನ ಆಯೋಜಿಸಲಿದ್ದು, ಇದರಿಂದ ಬಂದ ಹಣವನ್ನು ಕೊಡಗು ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಜೊತೆಗೆ ಈ ಪ್ರದರ್ಶನಕ್ಕೆ ಚಿತ್ರಮಂದಿರದ ಬಾಡಿಗೆಯನ್ನು ತಾನೇ ಭರಿಸುವುದಾಗಿ ಹಾಗೂ ಟಿಕೆಟ್‌ ದರವನ್ನು ಕೊಡಗು ಸಂತ್ರಸ್ತರ ಪರವಾಗಿ ಕೆಲಸ ಮಾಡುತ್ತಿರುವ ಸಂಘಟನೆಯೇ ನಿರ್ಧಾರ ಮಾಡಲಿದೆ ಎಂದು ಮುನಿರತ್ನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next