Advertisement

ಕುರುಕ್ಷೇತ್ರದಲ್ಲಿ ರವಿಚಂದ್ರನ್‌?

05:13 PM May 11, 2017 | Sharanya Alva |

ನಿರ್ಮಾಪಕ ಮುನಿರತ್ನ ಅವರು “ಕುರುಕ್ಷೇತ್ರ’ ಎಂಬ ಚಿತ್ರ ಮಾಡುವುದಾಗಿ ಘೋಷಣೆ ಮಾಡಿದ್ದು, ಆ ಚಿತ್ರದಲ್ಲಿ ದುರ್ಯೋಧನ ಪಾತ್ರಕ್ಕೆ ದರ್ಶನ್‌ ಆಯ್ಕೆಯಾಗಿದ್ದು, ಈಗಾಗಲೇ ಹೈದರಾಬಾದ್‌ನಲ್ಲಿ ಟೆಸ್ಟ್‌ ಶೂಟ್‌ ಆಗಿದ್ದು ಎಲ್ಲವೂ ಗೊತ್ತಿದೆ. ಆದರೆ, ಉಳಿದ ಪಾತ್ರಗಳಿಗೆ ಯಾರ್ಯಾರು ಆಯ್ಕೆ ಆಗಲಿದ್ದಾರೆ ಎಂಬ ಬಗ್ಗೆ ಮಾತ್ರ ಮಾಹಿತಿ ಇಲ್ಲ. ಈಗ ಎಲ್ಲೆಡೆ ಒಂದು ಸುದ್ದಿ ಹರಿದಾಡುತ್ತಿದೆ.

Advertisement

ಅದು ರವಿಚಂದ್ರನ್‌ ಅವರು “ಕುರುಕ್ಷೇತ್ರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋದು. ಧರ್ಮರಾಯ ಪಾತ್ರ  ಮಾಡುತ್ತಾರಂತೆ, ಹಾಗಂತೆ  ಹೀಗಂತೆ ಎಂಬ ಸುದ್ದಿ ಜೋರಾಗಿದೆ. ಆದರೆ, ರವಿಚಂದ್ರನ್‌ ಮಾತ್ರ ಆ
ಕುರಿತು ಎಲ್ಲೂ ಖಚಿತಪಡಿಸಿಲ್ಲ. ನಿರ್ಮಾಪಕ ಮುನಿರತ್ನ ಆಗಲಿ, ನಿರ್ದೇಶಕ ನಾಗಣ್ಣ ಆಗಲಿ ಈ ಕುರಿತು ಹೇಳಿಕೊಂಡಿಲ್ಲ. ಆದರೂ ರವಿಚಂದ್ರನ್‌ ಅವರು “ಕುರುಕ್ಷೇತ್ರ’ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಜೋರಾಗಿರುವುದಂತೂ ನಿಜ.

ಈಗಾಗಲೇ ಚಿತ್ರೀಕರಣಕ್ಕೆ ಚಿತ್ರತಂಡ ಅಣಿಯಾಗುತ್ತಿದೆ. ಮುನಿರತ್ನ ಅವರು ಒಂದಷ್ಟು ಸ್ಟಾರ್‌ನಟರನ್ನೇ ಚಿತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಆಸೆಯಲ್ಲಿದ್ದಾರೆ. ಇಲ್ಲಿನ ಸ್ಟಾರ್‌ ನಟರು “ಕುರುಕ್ಷೇತ್ರ’ ಸೇರಿಕೊಳ್ಳುತ್ತಾರೋ ಅಥವಾ ದಕ್ಷಿಣ ಭಾರತದ ನಟರು ಬರುತ್ತಾರೋ ಎಂಬುದಕ್ಕೆ ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next