Advertisement

ಫೆ.26ರಂದು ಕುಂದಾಪ್ರ ಭಾಷೆಯ “ಕುಂದಾಪುರ” ಸಿನಿಮಾ ಬಿಡುಗಡೆ

06:08 PM Feb 25, 2021 | Team Udayavani |

ಕುಂದಾಪುರ: ಓಂ ಗುರು ಬಸ್ರೂರು ನಿರ್ದೇಶನದಲ್ಲಿ ಮೂಡಿಬಂದಿರುವ ಕುಂದಾಪ್ರ ಕನ್ನಡದ ನೂತನ ಚಲನಚಿತ್ರ “ಕುಂದಾಪುರ” ಶುಕ್ರವಾರ (ಫೆ.26, 2021) ಕೋಟೇಶ್ವರದ  ಭಾರತ್ ಸಿನಿಮಾ ಮಂದಿರದಲ್ಲಿ ಬಿಡುಗಡೆಯಾಗಲಿದೆ.

Advertisement

ಈಗಾಗಲೇ ಕುಂದಾಪುರ ಸಿನಿಮಾದ ಟ್ರೈಲರ್ ಯೂಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡಿತ್ತು. ಜಿಸಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಕುಂದಗನ್ನಡದ ಅವಳಿ ಖಳನಾಯಕರೆಂದು ಖ್ಯಾತಿ ಪಡೆದ ಓಂ ಗುರು ಬಸ್ರೂರು ಅವರು ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಓಂ ಗುರು ಹಾಗೂ ಚಂದ್ರಶೇಖರ್ ಬಸ್ರೂರ್ ಅವರು ಚಿತ್ರದ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದು, ಉತ್ತಮ್ ಸಾರಂಗ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಚಿತ್ರದಲ್ಲಿ ಓಂ ಗುರು ಬಸ್ರೂರ್, ಚಂದ್ರಶೇಖರ್ ಬಸ್ರೂರ್, ರಘು ಪಾಂಡೇಶ್ವರ, ನಾಗರಾಜ್ ತೆಕ್ಕಟ್ಟೆ, ಕರುಣಾಕರ್ ಕುಂದರ್, ಕವನ ಜಾಗ್ವಾರ್ ನಟಿಸಿದ್ದಾರೆ. ಕಟಕ, ಮಫ್ತಿ ಚಿತ್ರದಲ್ಲಿ ಖಳನಾಯಕರಾಗಿದ್ದ ಬಾಲರಾಜ್ ವಾಡಿ ಕೂಡಾ ಮುಖ್ಯಭೂಮಿಕೆಯಲ್ಲಿದ್ದಾರೆ.

ಕುಂದಾಪುರ ಚಿತ್ರಕ್ಕೆ ನಟರಾಜ್ ಸಾಹಸ ಸಂಯೋಜನೆ, ಪ್ರವೀಣ್ ನಾಡ ಅವರ ಛಾಯಾಗ್ರಹಣವಿದೆ. ತನಿಖೆಯ ಸುತ್ತ ಸುತ್ತುವ ಈ ಚಿತ್ರ ಸಸ್ಪೆನ್ಸ್ ಕಥಾ ಹಂದರ ಹೊಂದಿದೆ ಎಂದು ಚಿತ್ರತಂಡ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next