Advertisement

Kundapura ನದಿಗೆ ಹಾರಿ ನಾಪತ್ತೆ; ಸಿಗದ ಸುಳಿವು

11:38 PM Jul 17, 2024 | Team Udayavani |

ಕುಂದಾಪುರ: ಕಂಡ್ಲೂರು ಸಮೀಪದ ಸೇತುವೆಯಿಂದ ಮಂಗಳ ವಾರ ವಾರಾಹಿ ನದಿಗೆ ಹಾರಿ, ನೀರಲ್ಲಿ ಕೊಚ್ಚಿಕೊಂಡು ಹೋಗಿರುವ ಹರೀಶ್‌ (44) ಕಾಳಾವರ ಅವರ ಬಗ್ಗೆ ಬುಧವಾರ ದಿನವಿಡೀ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ.

Advertisement

ಕುಂದಾಪುರದ ಅಗ್ನಿ ಶಾಮಕ ದಳದ ಸಿಬಂದಿ ಬೋಟಿನಲ್ಲಿ, ಸ್ಥಳೀಯ ಶೌರ್ಯ ತಂಡದ ಸದಸ್ಯರು, ಮುಳುಗು ತಜ್ಞ ಈಶ್ವರ್‌ ಮಲ್ಪೆ ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಕಂಡ್ಲೂರಿನಿಂದ ಗುಲ್ವಾಡಿ, ಬಸ್ರೂರು, ಆನಗಳ್ಳಿ, ಸಂಗಮ್‌ ಸೇತುವೆಯವರೆಗೂ ಹುಡುಕಲಾಯಿತು.

ಕುಂದಾಪುರ ಗ್ರಾಮಾಂತರ ವೃತ್ತ ನಿರೀಕ್ಷಕ ಜಯರಾಮ ಗೌಡ ಭೇಟಿ ನೀಡಿದರು. ಕಂಡ್ಲೂರು ಠಾಣಾ ಎಸ್‌ಐ ನೂತನ್‌ ಹಾಗೂ ಸಿಬಂದಿ ಹುಡುಕಾಟ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

ಶಾಸಕ ಕೊಡ್ಗಿ ಭೇಟಿ
ಹುಡುಕಾಟ ಕಾರ್ಯಾಚರಣೆ ನಡೆಯುತ್ತಿದ್ದ ಹೇರಿಕುದ್ರು ಪ್ರದೇಶಕ್ಕೆ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಭೇಟಿ ನೀಡಿ, ಪತ್ತೆಗಾಗಿ ಎಲ್ಲ ಪ್ರಯತ್ನ ನಡೆಸುವಂತೆ ಪೊಲೀಸರಿಗೆ ಸೂಚಿಸಿದರಲ್ಲದೇ ಘಟನೆ ಕುರಿತು ಎಲ್ಲ ಆಯಾಮದಲ್ಲೂ ತನಿಖೆ ನಡೆಸುವಂತೆಯೂ ಅವರು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next