Advertisement

Kundapura ಮನೆ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ

11:52 PM Jan 03, 2024 | Team Udayavani |

ಕುಂದಾಪುರ: ಇಲ್ಲಿನ ಮಂಗಲ್‌ ಪಾಂಡೆ ರಸ್ತೆಯ ಖಾಲಿ ಇದ್ದ ಮನೆಯಲ್ಲಿ ಕಳ್ಳತನವಾಗಿದೆ. ಮನೆ ಮಾಲಕ ಉಮೇಶ ಅವರು ವಿದೇಶದಲ್ಲಿದ್ದು, ಅವರ ಸಹೋದರ ದಿನೇಶ್‌ ಉಪ್ಪುಂದ ಮನೆಯನ್ನು ವಾರಕ್ಕೊಮ್ಮೆ ಬಂದು ನೋಡಿ ಹೋಗುತ್ತಿದ್ದರು.

Advertisement

ಡಿ. 30ರಂದು ಮನೆ ನೋಡಿಕೊಂಡು ಹೋಗಿದ್ದು ಜ. 1ರಂದು ನೋಡಿದಾಗ ಕಳ್ಳರು ಮನೆಯ ಒಂದನೆ ಮಹಡಿಯ ಬಾಗಿಲನ್ನು ಒಡೆದು, ಮೂರು ಕೊಠಡಿಗಳ ಗಾಡ್ರೇಜ್‌ನ ಬಾಗಿಲನ್ನು ಒಡೆದು ಹಾಕಿ ಗಾಡ್ರೇಜಿನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರ ಕಳವು ಮಾಡಿದ್ದಾರೆ. ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next