Advertisement

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

05:01 PM Sep 19, 2024 | Team Udayavani |

ಕುಂದಾಪುರ : ಕೆಂಚನೂರು ಗ್ರಾಮದ ಶಂಕರಪ್ಪನ ಕೊಡ್ಲು ಎಂಬಲ್ಲಿನ ಹೆಮ್ಮಾಡಿ – ಕೊಲ್ಲೂರು ಮುಖ್ಯ ರಸ್ತೆಯ ಬದಿಯ ಚರಂಡಿಯಲ್ಲಿ ಯಾರೋ ಕಿಡಿಗೇಡಿಗಳು ಒಂದು ಪ್ಲಾಸ್ಟಿಕ್‌ ಚೀಲದಲ್ಲಿ ಯಾವುದೋ ಪ್ರಾಣಿಯ ತ್ಯಾಜ್ಯವನ್ನು ಬೀಸಾಡಿರುವುದು ಸೆ.18 ರಂದು ಪತ್ತೆಯಾಗಿದೆ.

Advertisement

ರಸ್ತೆ ಬದಿ ವಾಸನೆ ಬರುತ್ತಿರುವುದನ್ನು ಸತೀಶ್‌ ಎಂಬುವರು ಪರಿಶೀಲಿಸಿ, ರವಿ ಕೆಂಚನೂರು ಅವರಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಾವುದೋ ಪ್ರಾಣಿಯ ತ್ಯಾಜ್ಯ ಕೊಳೆತು ವಾಸನೆ ಬರುತ್ತಿದ್ದು, ನಾಯಿಗಳು ಎಳೆದಾಡಿ, ಹರಡಿ ಹಾಕಿವೆ.

ಯಾರೋ ಕಿಡಿಗೇಡಿಗಳು ದ್ವೇಷ ಪೂರ್ವಕವಾಗಿ ಈ ಕೃತ್ಯ ಎಸಗಿರುವುದಾಗಿ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next