Advertisement

Kundapur: ತಾಯಿ-ಮಕ್ಕಳ ಆಸ್ಪತ್ರೆಗೆ ತಜ್ಞ ವೈದ್ಯರ ನೇಮಕ್ಕೆ ಕ್ರಮ: ಸಚಿವ ಡಾ| ಜಿ.ಪರಮೇಶ್ವರ

11:28 PM Dec 12, 2023 | Team Udayavani |

ಬೆಳಗಾವಿ: ಕುಂದಾಪುರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆಯಲ್ಲಿ ಖಾಲಿ ಇರುವ ಮೂವರು ತಜ್ಞ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ ಹೇಳಿದರು.

Advertisement

ವಿಧಾನಸಭೆಯಲ್ಲಿ ಶಾಸಕ ಎ. ಕಿರಣಕುಮಾರ ಕೊಡ್ಗಿ ಗಮನ ಸೆಳೆಯುವ ಸೂಚನೆ ಮಂಡಿಸಿ, ಕುಂದಾಪುರ ತಾಯಿ ಮತ್ತು ಮಕ್ಕಳ ಆಸ್ಪತ್ರೆ 100 ಹಾಸಿಗೆಯದ್ದಾಗಿದ್ದು, ತಿಂಗಳಿಗೆ ಸುಮಾರು 150 ಹೆರಿಗೆ ಆಗುತ್ತಿದೆ, ನಿತ್ಯ 80-100 ಹೊರರೋಗಿಗಳು ಬರುತ್ತಾರೆ. ಆದರೆ, ಸ್ತ್ರೀರೋಗ, ಮಕ್ಕಳ ತಜ್ಞರೆ ಇಲ್ಲವೆಂದರೆ ಹೇಗೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಪರವಾಗಿ ಉತ್ತರಿಸಿದ ಸಚಿವ ಡಾ| ಜಿ. ಪರಮೇಶ್ವರ, ಕುಂದಾಪುರದಲ್ಲಿ ತಾಯಿ-ಮಕ್ಕಳ ಆಸ್ಪತ್ರೆಗೆ 16 ಹುದ್ದೆಗಳು ಮಂಜೂರಾಗಿದ್ದು, 13 ಹುದ್ದೆಗಳು ಭರ್ತಿಯಾಗಿವೆ. ಮೂರು ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಅದೇ ಆಸ್ಪತ್ರೆ ಪಕ್ಕದಲ್ಲಿ ಸಾರ್ವಜನಿಕ ಆಸ್ಪತ್ರೆ ಇದ್ದು, ಅಲ್ಲಿ 182 ಹುದ್ದೆಗಳಲ್ಲಿ 143 ಹುದ್ದೆಗಳು ಭರ್ತಿಯಾಗಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next