Advertisement

ತುಂಬಿ ಹರಿಯುತ್ತಿದೆ ಗೌರಿ ಹೊಳೆ:ಕುಸಿಯುವ ಹಂತದಲ್ಲಿ ಕುಂಡಡ್ಕ ಸೇತುವೆ

08:15 AM Jul 21, 2017 | Team Udayavani |

– ಪ್ರವೀಣ್‌ ಕುಮಾರ್‌

Advertisement

ಸವಣೂರು
: ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮ ಹಾಗೂ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮಗಳನ್ನು ಜೋಡಿಸುವ ಗೌರಿಹೊಳೆಗೆ ಅಡ್ಡಲಾಗಿ ನಿರ್ಮಿಸಿದ ಏಕೈಕ ಸೇತುವೆ ಶಿಥಿಲಗೊಂಡಿದ್ದು ಕುಸಿಯುವ ಭೀತಿಯಲ್ಲಿದೆ. ಇದರಿಂದ ಈ ಭಾಗದ ಜನರು ಸಂಪರ್ಕ ಕಡಿತದ ಭೀತಿ ಎದುರಿಸುತ್ತಿದ್ದಾರೆ. ಮಳೆಗಾಲವಾಗಿದ್ದು, ಸುತ್ತಮುತ್ತಲು ಹೆಚ್ಚಿನ ಮಳೆಯೂ ಬೀಳುತ್ತಿದೆ. ತಾಲೂಕಿನ ಹಲವು ಸೇತುವೆಗಳು ಮುಳುಗುವ ಸ್ಥಿತಿಯಲ್ಲಿವೆ. ದಿನೇ ದಿನೇ ಗೌರಿ ಹೊಳೆಯಲ್ಲೂ ನೀರಿನ ಮಟ್ಟವು ಏರಿಕೆಯಾಗುತ್ತಿದೆ. ಸೇತುವೆಯ ಪಿಲ್ಲರ್‌ಗೆ ಬೃಹತ್‌ ಮರವೊಂದು ಬಡಿಯು ತ್ತಿದ್ದು, ನೀರಿನ ಮಟ್ಟ ಹೆಚ್ಚಳವಾಗಿ ಅಥವಾ ಮರ ಬಿದ್ದು ಸೇತುವೆಗೆ ಹಾನಿಯಾದರೇನು ಗತಿ ಎಂಬುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಈ ಸೇತುವೆ ದಾಟಿ ಮಕ್ಕಳು ಚೆನ್ನಾವರ ಕಿ.ಪ್ರಾ. ಶಾಲೆ, ಮುಕ್ಕೂರು ಹಿ.ಪ್ರಾ. ಶಾಲೆ, ಸವಣೂರು, ಪೆರುವಾಜೆ ಕಾಲೇಜುಗಳಿಗೆ ಹೋಗುತ್ತಾರೆ. ಸೇತುವೆ ಕುಸಿದರೆ ಇವರೆಲ್ಲರೂ ಸಂಕಷ್ಟಕ್ಕೆ ಸಿಲುಕಲಿದ್ದಾರೆ. 

ಅಪಾಯಕಾರಿ ಕೂಡ
ಇದರೊಂದಿಗೆ ಸೇತುವೆಯ ಎರಡೂ ಬದಿಯಲ್ಲೂ ಸರಿಯಾದ ತಡೆಗೋಡೆ ಇಲ್ಲ. ಇದರಿಂದ ವಾಹನ ಸವಾರರಿಗೆ , ಪುಟ್ಟ ಮಕ್ಕಳಿಗೆ ತೀರಾ ಅಪಾಯಕಾರಿಯಾಗಿ ಪರಿಣಮಿಸಿದೆ. ಮಳೆಗಾಲದಲ್ಲಿ ಹೊಳೆಯಲ್ಲಿ ನೀರು ತುಂಬಿ ಹರಿಯುವುದರಿಂದ ಸ್ವಲ್ಪ ಎಡವಟ್ಟಾದರೂ ಜೀವಕ್ಕೇ ಅಪಾಯ ಒದಗುವ ಸ್ಥಿತಿ ಇದೆ. 

ಸುಳ್ಯ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಇಲ್ಲಿ ಸುಮಾರು 20 ವರ್ಷಗಳ ಹಿಂದೆ ಜನರ ಬೇಡಿಕೆಯಂತೆ ಇಲ್ಲಿ ಕಿರುಸೇತುವೆ ಯೊಂದನ್ನು ನಿರ್ಮಿಸಲಾಗಿತ್ತು. ಗುಣ ಮಟ್ಟದ ಕೊರತೆ, ನೀರಿನ ಪ್ರಮಾಣ ಹೆಚ್ಚಳ ದಿಂದ ಈ ಸೇತುವೆ ಈಗ ಶಿಥಿಲಗೊಂಡು ಕುಸಿಯುವ ಸ್ಥಿತಿಯಲ್ಲಿದೆ. ಇದು ಕಿರು ಸೇತುವೆಯಾದ ಕಾರಣ ಘನ ವಾಹನಗಳು ಹೋಗುವಂತಿಲ್ಲ.

Advertisement

ನಿರಂತರವಾಗಿ ಸುರಿಯುತ್ತಿರುವ ಮಳೆ ಯಿಂದ ಸೇತುವೆಯು ಕುಸಿಯುವ ಭೀತಿ ಎದುರಾಗಿದೆ.ಜತೆಗೆ ಬೃಹತ್‌ ಮರವೊಂದು ಸೇತುವೆಯ ಪಿಲ್ಲರ್‌ ಬಳಿ ನಿಂತಿದ್ದು ನೀರಿನ ರಭಸಕ್ಕೆ ನಿರಂತರವಾಗಿ ಪಿಲ್ಲರ್‌ಗೆ ಬಡಿಯುತ್ತಿದ್ದು ಯಾವ ಸಂದರ್ಭದಲ್ಲಿ ಅಪಾಯ ತಂದೊಡ್ಡಬಹುದು ಎಂಬುದನ್ನು ಊಹಿಸಲು ಅಸಾಧ್ಯ. ಕಳೆದ ಬೇಸಗೆಯಲ್ಲೇ ಈ ಸೇತುವೆಯ ದುರಸ್ತಿ ಕುರಿತು ಗಮನಹರಿಸಿದ್ದರೆ ಈ ಮಳೆಗಾಲದಲ್ಲಿ ಭೀತಿಯ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎನ್ನುತ್ತಾರೆ ಸಾರ್ವಜನಿಕರು. 

ಶಾಸಕರು ಭೇಟಿ ನೀಡಿದರಷ್ಟೇ!
ಈ ಸೇತುವೆ ಕುಸಿದು ಸಂಪರ್ಕ ಕಡಿತವಾದರೆ ಪಾಲ್ತಾಡಿ ಭಾಗದಿಂದ ಸವಣೂರು, ಕಾಣಿಯೂರು, ಪೆರುವಾಜೆಗೆ ಹೋಗುವವರು ಪುತ್ತೂರು ಅಥವಾ ಬೆಳ್ಳಾರೆ ಮೂಲಕ ಸುತ್ತಿ ಬಳಸಿ ಹೋಗಬೇಕು. ಈ ಕುರಿತು ಹಿಂದೆಯೂ ಉದಯವಾಣಿ ವರದಿ ಪ್ರಕಟಿಸಿ ಸಂಬಂಧಪಟ್ಟವರನ್ನು ಎಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿದ ಸುಳ್ಯ ಶಾಸಕ ಎಸ್‌. ಅಂಗಾರ ಅವರು ತುರ್ತುಕಾಮಗಾರಿಗೆ ಸ್ಪಂದಿಸುವ ಭರವಸೆ ನೀಡಿದ್ದರು. ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದನ್ನು ಹೊರತುಪಡಿಸಿದಂತೆ ಬೇರಾವ ಕೆಲಸವೂ ಆಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next