Advertisement

Kumaradhara: ಹೆದ್ದಾರಿಯಲ್ಲಿ ಬೃಹತ್‌ ಹೊಂಡ ನಿರ್ಮಾಣ ಗ್ರಾಮಸ್ಥರಿಂದ ಹೊಂಡ-ಗುಂಡಿ ಅಳತೆ!

12:48 PM Sep 04, 2024 | Team Udayavani |

ಸುಬ್ರಹ್ಮಣ್ಯ: ಧರ್ಮಸ್ಥಳ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರಾ ಬಳಿ ಹೆದ್ದಾರಿಯಲ್ಲಿ ಬೃಹತ್‌ ಹೊಂಡ ನಿರ್ಮಾ ಣಗೊಂಡಿದ್ದು, ಅಪಾಯವನ್ನು ಆಹ್ವಾನಿ ಸುವಂತಿದೆ. ಜತೆಗೆ ಸಂಚಾರಕ್ಕೂ ಕಷ್ಟವಾಗು ತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.

Advertisement

ಹೆದ್ದಾರಿಯ ಹೊಂಡ- ಗುಂಡಿಗಳನ್ನು ದುರಸ್ತಿ ಮಾಡದೇ ಇರುವ ಬಗ್ಗೆ ಸಾರ್ವಜ ನಿಕರು ಆಕ್ರೋಶ ವ್ಯಕ್ತಪಡಿಸಿ, ಹೊಂಡಕ್ಕೆ ಅಳತೆ ಮಾಪಕ ಹಿಡಿದು ಈ ಹೊಂಡ ಎಷ್ಟು ಅಗಲ ಹಾಗೂ ಆಳ ಇದೆ ಎಂದು ಅಳೆಯುವ ಮೂಲಕ ವ್ಯಂಗ್ಯವಾಗಿ ಅಸಮಾಧಾನ ಹೊರಹಾಕಿ ಗಂಭೀರತೆಯನ್ನು ತೋರಿಸಿ, ಅಧಿಕಾರಿಗಳ ನಿರ್ಲಕ್ಷ್ಯ ಬಗ್ಗೆ ತಮ್ಮ ಅಸಮಾಧಾನವನ್ನು ತೋರಿಸಿದ್ದಾರೆ.

ಸೀತಾರಾಮ ಗೌಡ, ದಿನೇಶ್‌, ಉಮೇಶ್‌ ಮತ್ತಿತರರು ಹೊಂಡ ಅಳತೆ ಯನ್ನು ಪತ್ತೆ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ. ಇಲ್ಲಿನ ಹೊಂಡ-ಗುಂಡಿಗಳನ್ನು ತಪ್ಪಿಸಲು ಹೋದ ವೇಳೆ ಅಪಘಾತಗಳು, ನಿಯಂತ್ರಣ ತಪ್ಪಿ ಅವಾಂತರಗಳೂ ನಡೆ ಯುತ್ತಿದ್ದರೂ ಕ್ರಮಕೈಗೊಂಡಿಲ್ಲ ಎಂದು ಆರೋಪಿ ಸಲಾಗಿದೆ. ಕೂಡಲೇ ಹೆದ್ದಾರಿ ಹೊಂಡ-ಗುಂಡಿ ಮುಚ್ಚಿ ದುರಸ್ತಿ ಮಾಡುವಂತೆ ಆಗ್ರಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next