Advertisement

ಆರೋಗ್ಯ ತಪಾಸಣೆಗಾಗಿ ಕುಮಾರ ರಕ್ಷಾ

06:20 AM Feb 22, 2018 | |

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷದ ವತಿಯಿಂದ ಸೇವಾ ಯೋಜನೆಗಳಿಗೂ ಚಾಲನೆ ದೊರೆಯುತ್ತಿದ್ದು, ಜೆಡಿಎಸ್‌ ವತಿಯಿಂದ ಆರೋಗ್ಯ ತಪಾಸಣೆಗಾಗಿ “ಕುಮಾರ ರಕ್ಷಣಾ ಜನಸೇವಾ’ ಸಂಚಾರಿ ವಾಹನ ಸಿದ್ಧಪಡಿಸಲಾಗಿದೆ.

Advertisement

ಜೆಡಿಎಸ್‌ ಹಿರಿಯ ಉಪಾಧ್ಯಕ್ಷ ಹಾಗೂ ಉದ್ಯಮಿಯೂ ಆಗಿರುವ ಉಮೇಶ್‌ಕುಮಾರ್‌ ಹಾಗೂ ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ “ಕುಮಾರ ರಕ್ಷಣಾ ಜನಸೇವಾ’ ಯೋಜನೆಯ ರೂವಾರಿಗಳು. ಕುಮಾರ ರಕ್ಷಣಾ ಜನಸೇವಾ ಸಂಚಾರಿ ವಾಹನ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಮಧುಮೇಹ, ರಕ್ತದ ಒತ್ತಡ, ರಕ್ತ ಪರೀಕ್ಷೆ, ಎಕ್ಸ್‌ ರೇ ಸೇರಿ ಹಲವು ಸೇವೆ ಒದಗಿಸಲಿದೆ.

ವಾಹನದಲ್ಲಿ ತಜ್ಞ ವೈದ್ಯ ಹಾಗೂ ಸಿಬ್ಬಂದಿಯೂ ಇರಲಿದ್ದಾರೆ. ಪಕ್ಷದ ಕಚೇರಿಯಲ್ಲಿ ಬುಧವಾರ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ “ಕುಮಾರ ರಕ್ಷಾ ಜನಸೇವಾ’ ವಾಹನಕ್ಕೆ ಹಸಿರು ನಿಶಾನೆ ತೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಕ್ಷದ ಮುಖಂಡರು ಜನರಿಗೆ ಅನುಕೂಲ ಕಲ್ಪಿಸಲು ಈ ಸೇವೆಗೆ ಮುಂದಾಗಿದ್ದಾರೆ. ಸಂಚಾರಿ ವಾಹನದಲ್ಲಿ ಹಿರಿಯ ನಾಯಕರಿಗೆ ತಪಾಸಣೆ ಮತ್ತು ಔಷಧ ವಿತರಣೆ, ಮಕ್ಕಳ ಆರೋಗ್ಯ ತಪಾಸಣೆ, ಕಾರ್ಮಿಕರಿಗೆ ಅಪಘಾತ ವೇಳೆ ತುರ್ತು ಚಿಕಿತ್ಸೆ, ನೇತ್ರ ತಪಾಸಣೆ, ಅಸ್ತಮಾ ಅಲರ್ಜಿಗೆ ಚಿಕಿತ್ಸೆ ಸಹ ನೀಡಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next