Advertisement

ಕುಲಾಲ ಸಂಘ ಮೀರಾರೋಡ್‌-ವಿರಾರ್‌: ಪಂಡರಾಪುರ ಯಾತ್ರೆ

04:32 PM Mar 16, 2018 | |

ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ಮೀರಾರೋಡ್‌ – ವಿರಾರ್‌ ಸ್ಥಳೀಯ ಸಮಿತಿಯ ವತಿಯಿಂದ ಮಹಾರಾಷ್ಟ್ರದ ಪುಣ್ಯಕ್ಷೇತ್ರವಾದ ಪಂಡರಾಪುರ ಯಾತ್ರೆಯು ಮಾ. 11ರಂದು ನಡೆಯಿತು.

Advertisement

ಯಾತ್ರೆಯಲ್ಲಿ ಸುಮಾರು 85 ಕ್ಕೂ ಮಿಕ್ಕಿದ ಸದಸ್ಯರು ಭಾಗವಹಿಸಿ ಪಾಂಡುರಂಗ ವಿಠಲನ ದರ್ಶನಗೈದು ಪುನೀತರಾದರು. ಯಾತ್ರೆಯ ಸಂಪೂರ್ಣ ಉಸ್ತುವಾರಿಯನ್ನು ಸಮಿತಿಯ ಸಕ್ರಿಯ ಸದಸ್ಯ, ಸಂಘಟಕ ಅದ್ಯಪಾಡಿಬೈಲೈ ಚಂದ್ರಹಾಸ್‌ ಕೆ. ಮೂಲ್ಯ ಮೀರಾರೋಡ್‌ ಮತ್ತು ಜೊತೆ ಕಾರ್ಯದರ್ಶಿ ಹಾಗೂ ಖ್ಯಾತ ಉದ್ಯಮಿ ಬಂಟ್ವಾಳ ಉಮೇಶ್‌ ಎಂ. ಬಂಗೇರ ಮೀರಾರೋಡ್‌ ಇವರು ಅಚ್ಚುಕಟಾxಗಿ ನೆರವೇರಿಸಿದ್ದರು.ಯಾತ್ರೆಯಲ್ಲಿ ಸಮಿತಿಯ ಉಪ ಕಾರ್ಯಾಧ್ಯಕ್ಷ ರಘುನಾಥ್‌ ಕರ್ಕೇರ, ಭಾಯಂದರ್‌, ಕಾರ್ಯದರ್ಶಿ ಮೋಹನ್‌ ಬಂಜನ್‌ ನಲಾಸೋಪರ,  ಕೋಶಾಧಿಕಾರಿ ಯೋಗೀಶ್‌ ಬಂಗೇರ ನಲಾಸೋಪರ, ಗುರುವಂದನಾ ಭಜನಾ ಮಂಡಳಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಕುಲಾಲ್‌ ಭಾಯಂದರ್‌, ಜೊತೆ ಕೋಶಾಧಿಕಾರಿ ಸತೀಶ್‌ ಮೂಲ್ಯ ಭಾಯಂದರ್‌, ಸಂಘಟನ  ಕಾರ್ಯದರ್ಶಿ ಉದಯ ಮೂಲ್ಯ ಮೀರಾರೋಡ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಗೀತಾ ವೈ. ಬಂಗೇರ ನಲಾಸೋಪರ, ಕಾರ್ಯದರ್ಶಿ  ರೇಣುಕಾ ಎಸ್‌. ಸಾಲ್ಯಾನ್‌ ಮೀರಾರೋಡ್‌, ಕೋಶಾಧಿಕಾರಿ ಸುಜಾತಾ ಆರ್‌. ಸಾಲ್ಯಾನ್‌ ನಲಸೋಪರ,  ಜೊತೆ ಕೋಶಾಧಿಕಾರಿ  ಸಾವಿತ್ರಿ ಎಸ್‌. ಬಂಗೇರ ನಲಾಸೋಪರ ಇವರಲ್ಲದೆ ಸಮಿತಿಯ ಹೆಚ್ಚಿನ ಕಾರ್ಯಕತ‌ìರು, ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು ಸಹಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next