Advertisement

ಕುಡುತಿನಿ ಪ.ಪಂ ಮುಖ್ಯಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕ ತುಕಾರಾಂ

08:57 PM Dec 13, 2022 | Team Udayavani |

ಕುರುಗೋಡು: ಸಮೀಪದ ಕುಡುತಿನಿ ಪ.ಪಂ ಮುಖ್ಯಧಿಕಾರಿ ತೀರ್ಥಪ್ರಸಾದ್ ಅವರು ಸದಸ್ಯರಿಗೆ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ ಎಂಬ ಸದಸ್ಯರ ದೂರಿನ ಮೇರೆಗೆ ಶಾಸಕ ಈ. ತುಕಾರಾಂ ಅವರು ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಮಂಗಳವಾರ ಜರುಗಿತು.

Advertisement

ಹೌದು ಪಪಂಯಲ್ಲಿ ಈ ಹಿಂದೆ ಇದ್ದ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಕಚೇರಿಯನ್ನು ಬೇರೆ ಕೆಲಸಕ್ಕೆ ಬಳಸಿಕೊಂಡು ಅವರನ್ನು ಸಿಬ್ಬಂದಿಗಳು ಕೂಡುವ ಹಾಲ್ ನಲ್ಲಿ ವ್ಯವಸ್ಥೆ ಮಾಡಿಕೊಟ್ಟಿರುವುದು ಸರಿಯಲ್ಲ ಕೂಡಲೇ ಅಧ್ಯಕ್ಷ ರಿಗೆ ಮೊದಲ ಇದ್ದ ಕೊಠಡಿ ಯಲ್ಲಿ ಅವರಿಗೆ ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಇಲ್ಲವಾದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಅಧಿಕಾರಿ ವಿರುದ್ಧ ಕಿಡಿಕಾರಿದರು.

ಪ.ಪಂ ಅಧ್ಯಕ್ಷರು ಗ್ರಾಮದ ಪ್ರಥಮ ಪ್ರಜೆ ಇದ್ದಂತೆ ಅವರನ್ನು ಇತರ ಕಾಣುವುದು ಶೋಭೆಯಲ್ಲ . ಮೊದಲು ಅವರು ನಂತರ ನಾನು, ನೀನು, ಅವರ ಕೈ ಕೆಳೆಗೆ ನೀವು ಕೆಲಸ ಮಾಡುತ್ತಿರುವುದು ಇದು ನಿಮ್ಮ ನೆನಪಲ್ಲಿ ಇರಬೇಕು ಎಂದರು.

ಅಧಿಕಾರಿ ಆದವರು ಎಲ್ಲರ ಜೊತೆಗೆ ಅನೂನ್ಯತೆಯಿಂದ ಇದ್ದು, ಪ್ರತಿಯೊಂದಕ್ಕೂ ಸಹಕಾರ ಮಾಡಿಕೊಂಡು ಪಪಂದ ಅಭಿವೃದ್ಧಿಗೆ ಒತ್ತು ನೀಡಬೇಕು. ಸಂವಿಧಾನಾತ್ಮಕವಾಗಿ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಹೇಳಿದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹಾಗೂ ಎಲ್ಲ ಸದಸ್ಯರೊಂದಿಗೆ ವಿಸ್ವಾಸದಿಂದ ಇದ್ದು ಪಪಂ ಅಭಿವೃದ್ಧಿಗೆ ಒತ್ತು ನೀಡಬೇಕು. ಮತ್ತೆ ಇತರ ಸಮಸ್ಯೆಗಳು ಮರು ಕಳಿಸದಂತೆ ಇರಬೇಕು ಎಂದರು.

Advertisement

ಸದಸ್ಯರು ಕಾಮಗಾರಿಗಳ ಬಗ್ಗೆ ಅಥವಾ ಸಮಸ್ಯೆಗಳ ಬಗ್ಗೆ ಇತರೆ ವಿಷಯಗಳ ಬಗ್ಗೆ ಚರ್ಚಿಸಲು ಬಂದರೆ ಅವರಿಗೆ ಪ್ರತಿಕ್ರಿಯೆ ನೀಡದೆ, ಸ್ಪಂದಿಸದೆ ಇರೋದು ನಿಮ್ಮ ಗೌರವಕ್ಕೆ ಶೋಭೆಯಲ್ಲ ಇನ್ಮುಂದೆ ಇತರ ಆಗದಂತೆ ಎಲ್ಲರೊಂದಿಗೆ ಅನುಕೂಲತೆ ಯಿಂದ ಇರಬೇಕು ಎಂದರು.

ಇದನ್ನೂ ಓದಿ: ಗುರುಪುರ: ಶೌಚಾಲಯದ ಗುಂಡಿ ತೆಗೆಯುವಾಗ ಮಣ್ಣು ಕುಸಿದು ಓರ್ವ ಸಾವು, ಇಬ್ಬರಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next