Advertisement

Kudligi; ತಾಲೂಕು ಕಚೇರಿಯಲ್ಲಿ ಕಸಗುಡಿಸಿದ ಶಾಸಕ !

11:47 PM Aug 25, 2023 | Team Udayavani |

ಕೂಡ್ಲಿಗಿ: ಉಪ ಖಜಾನೆ ಕಚೇರಿ ಉದ್ಘಾಟನೆಗೆ ಆಗಮಿಸಿದ್ದ ಶಾಸಕ ಡಾ|ಎನ್‌.ಟಿ. ಶ್ರೀನಿವಾಸ್‌ ಅವರು ತಾಲೂಕು ಆಡಳಿತ ಕಚೇರಿಯ ಆವರಣದಲ್ಲಿದ್ದ ಕಸವನ್ನು ಕಂಡು ತಾವೇ ಹಿಡಿಸೂಡಿ ಹಿಡಿದು ಗುಡಿಸಿದರು.

Advertisement

ವಿಜಯನಗರ ಜಿಲ್ಲೆ ಕೂಡ್ಲಿಗಿಯ ತಾಲೂಕು ಆಡಳಿತ ಭವನಕ್ಕೆ ಸ್ಥಳಾಂತರಗೊಂಡಿದ್ದ ಉಪ ಖಜಾನೆ ಕಚೇರಿ ಉದ್ಘಾಟನೆ ಶುಕ್ರವಾರ ಆಯೋಜನೆಯಾಗಿತ್ತು. ಶಾಸಕರು ಆಗಮಿಸಿದಾಗ ಕಚೇರಿ ಆವರಣದಲ್ಲಿ ಪ್ಲಾಸ್ಟಿಕ್‌ ಚೀಲ, ಚಹಾ ಲೋಟ, ನೀರಿನ ಬಾಟಲ್‌, ರದ್ದಿ ಕಾಗದ ಮುಂತಾದವು ಬಿದ್ದಿರುವುದನ್ನು ಕಂಡು ಬೇಸರಗೊಂಡರು.

ತತ್‌ಕ್ಷಣ ತಮ್ಮ ಸಹಾಯಕರಿಂದ ಹಿಡಿಸೂಡಿ ಹಾಗೂ ಕಸದ ಬುಟ್ಟಿಯನ್ನು ತರಿಸಿಕೊಂಡು ತಾವೇ ಒಂದು ಕಡೆಯಿಂದ ಆವರಣದ ಕಸ ಗುಡಿಸಿದರು. ಅನಂತರ ಅವರ ಬೆಂಬಲಿಗರು ಜತೆಗೂಡಿ ಕಸವನ್ನು ಎತ್ತಿ ಒಂದೆಡೆ ಹಾಕಿದರು. ಶಾಸಕರು ಬರುತ್ತಾರೆ ಎಂದರೂ ಆವರಣವನ್ನು ಸ್ವತ್ಛ ಮಾಡಿಲ್ಲ. ಹೀಗಾದರೆ ಪ್ರತಿ ದಿನ ಇಲ್ಲಿನ ವ್ಯವಸ್ಥೆ ಹೇಗಿರುತ್ತದೆ ಎಂದು ಅಲ್ಲಿದ್ದ ಮುಖಂಡರು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next