Advertisement

ಕು. ತೇಜಸ್ವಿನಿ ಹಿರೇಮಠ ರಂಗಪ್ರವೇಶ

12:36 PM Nov 11, 2017 | Team Udayavani |

ಸಂಯೋಗ ಸಂಸ್ಥೆಯು ಕು. ತೇಜಸ್ವಿನಿ ಹಿರೇಮಠ ಅವರ ನೃತ್ಯ ಪ್ರದೋಷವನ್ನು ಹಮ್ಮಿಕೊಂಡಿದೆ. ಇದು ವಿದುಷಿ ಲತಾ ಲಕ್ಷ್ಮೀಶ್‌ ಅವರ ಸಾರಥ್ಯದ 13ನೇ ಭರತನಾಟ್ಯ ರಂಗಪ್ರವೇಶ. ದಮಯಂತಿ ಮತ್ತು ಕೊಟ್ರೇಶ್‌ ಹಿರೇಮಠ ದಂಪತಿಯ ಪುತ್ರಿಯಾಗಿರುವ ತೇಜಸ್ವಿನಿ, ಕಳೆದ 7 ವರ್ಷಗಳಿಂದ ಭರತನಾಟ್ಯವನ್ನು ಕಲಿಯುತ್ತಿದ್ದಾರೆ. ನವರಾತ್ರಿ ಉತ್ಸವ, ಗಣೇಶೋತ್ಸವ, ಲಯನ್ಸ್‌ ಕ್ಲಬ್‌ ನಾಟ್ಯ ಕಾರ್ಯಕ್ರಮದಲ್ಲಿ ನೃತ್ಯ ನಡೆಸಿಕೊಟ್ಟಿದ್ದಾರೆ.

Advertisement

ತೇಜಸ್ವಿನಿ ಬಹುಮುಖೀ ಪ್ರತಿಭೆ. ಕೇವಲ ನಾಟ್ಯವಲ್ಲ, ಮಾಧುರ್ಯಗಾಯನವೂ ಇವರ ಇನ್ನೊಂದು ಪ್ರತಿಭೆ. ಲಕ್ಷ್ಮಿಭಟ್‌ ಮಾರ್ಗದರ್ಶನದಲ್ಲಿ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮವನ್ನೂ ಅಭ್ಯಸಿಸುತ್ತಿದ್ದಾರೆ. ಅಲ್ಲದೇ, ಹವ್ಯಕ ಮಂಜುನಾಥ್‌ ಮಾರ್ಗದರ್ಶನದಲ್ಲಿ 2 ವರ್ಷದಿಂದ ಯಕ್ಷಗಾನವನ್ನೂ ಕಲಿಯುತ್ತಿದ್ದಾರೆ. ಮಾಜಿ ಸಚಿವ ಸುರೇಶ್‌ ಕುಮಾರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಎಲ್ಲಿ?: ನ.12, ಭಾನುವಾರ, ಸಂ.5
ಯಾವಾಗ?: ಕೆಇಎ ಪ್ರಭಾತ್‌ ರಂಗಮಂದಿರ, ಬಸವೇಶ್ವರ ನಗರ

Advertisement

Udayavani is now on Telegram. Click here to join our channel and stay updated with the latest news.

Next