Advertisement

ಟಿಕೆಟ್‌ ಯಂತ್ರ ಸ್ಫೋಟ: ಕಂಡಕ್ಟರ್‌ಗೆ ಗಾಯ

10:28 PM Jan 28, 2022 | Team Udayavani |

ತಿರುವನಂತಪುರಂ: ಸರ್ಕಾರಿ ಬಸ್ಸಿನ ಟಿಕೆಟ್‌ ಯಂತ್ರವೇ ಸ್ಫೋಟಿಸಿ, ಕಂಡಕ್ಟರ್‌ಗೆ ಗಾಯವಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.

Advertisement

ತಿರುವನಂತಪುರಂನಿಂದ ಸುಲ್ತಾನ್‌ ಬತ್ತೇರಿಗೆ ಹೊರಟಿದ್ದ ಕೇರಳ ರಸ್ತೆ ಸಾರಿಗೆ ನಿಗಮದ(ಕೆಎಸ್‌ಆರ್‌ಟಿಸಿ) ಸೂಪರ್‌ ಡಿಲಕ್ಸ್‌ ಬಸ್ಸಿನಲ್ಲಿ ಈ ದುರಂತ ಸಂಭವಿಸಿದೆ.

ಟಿಕೆಟ್‌ ಯಂತ್ರ ಹಿಡಿದಿದ್ದ ಕಂಡಕ್ಟರ್‌ ಎಂಎಂ ಮೊಹಮ್ಮದ್‌ರ ಕೈಗಳಿಗೆ ಸುಟ್ಟ ಗಾಯಗಳಾಗಿವೆ.

ಈ ಟಿಕೆಟ್‌ ಯಂತ್ರಗಳನ್ನು ಎಲ್‌ಡಿಎಫ್ ಆಡಳಿತಾವಧಿಯಲ್ಲಿ ಮೈಕ್ರೋಎಫ್ಎಕ್ಸ್‌ ಹೆಸರಿನ ಖಾಸಗಿ ಸಂಸ್ಥೆಯಿಂದ ಖರೀದಿಸಲಾಗಿತ್ತು. ಸಾರ್ವಜನಿಕ ವಲಯದ ಸಂಸ್ಥೆ ಬಿಟ್ಟು ಖಾಸಗಿ ಸಂಸ್ಥೆಯಿಂದ ಟಿಕೆಟ್‌ ಯಂತ್ರ ಖರೀದಿಸಿದ್ದಕ್ಕೆ ಕೆಎಸ್‌ಆರ್‌ಟಿಸಿ ವಿರುದ್ಧ ಆಕ್ರೋಶವೂ ವ್ಯಕ್ತವಾಗಿತ್ತು. ಹಾಗೆಯೇ ಈ ವ್ಯವಹಾರದಲ್ಲಿ ಭ್ರಷ್ಟಾಚಾರವೂ ನಡೆದಿರುವ ಆರೋಪ ಕೇಳಿಬಂದಿತ್ತು.

ಇದನ್ನೂ ಓದಿ:ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

Advertisement
Advertisement

Udayavani is now on Telegram. Click here to join our channel and stay updated with the latest news.

Next