Advertisement

ಕೆಎಸ್‌ಆರ್‌ಟಿಸಿಗೆ “ಅವಾರ್ಡ್‌ಆಫ್ ಎಕ್ಸಲೆನ್ಸ್‌’ಪ್ರಶಸ್ತಿ

09:49 AM Oct 29, 2018 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ಕ್ಕೆ ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ
ಸಚಿವಾಲಯದಿಂದ “ಅವಾರ್ಡ್‌ ಆಫ್ ಎಕ್ಸಲೆನ್ಸ್‌’ ಪ್ರಶಸ್ತಿ ಲಭಿಸಿದೆ. 16 ಸಣ್ಣ ಮತ್ತು ಮಧ್ಯಮ ನಗರ ಹಾಗೂ
ಪಟ್ಟಣಗಳಲ್ಲಿ ನಿಗಮವು 786 ಬಸ್‌ಗಳನ್ನು ಜಾರಿಗೊಳಿಸಿದ್ದು, ಇದರಿಂದ 5.10 ಲಕ್ಷ ಪ್ರಯಾಣಿಕರು ಅನುಕೂಲ ಪಡೆಯುತ್ತಿದ್ದಾರೆ.
ಈ ನಗರ ಸಾರಿಗೆ ಸೇವೆಗೆ ಕೇಂದ್ರದ ಪ್ರಶಸ್ತಿ ದೊರಕಿದ್ದು, ನಾಗ್ಪುರದಲ್ಲಿ ನ.4ರಂದುನಡೆಯಲಿರುವ 11ನೇ ಅರ್ಬನ್‌ ಮೊಬಿಲಿಟಿ ಸಮ್ಮೇಳನ ಮತ್ತು ಪ್ರದರ್ಶನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆಎಂದು ಪ್ರಕಟಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next