Advertisement

ದೇವನಹಳ್ಳಿ: ಕಾರು,ಟ್ರ್ಯಾಕ್ಟರ್ ಗೆ ಬಸ್ ಢಿಕ್ಕಿ; ಪ್ರಯಾಣಿಕರು ಪಾರು, ಚಾಲಕ ಗಂಭೀರ

07:20 PM May 31, 2022 | Team Udayavani |

ದೇವನಹಳ್ಳಿ: ಕೆಎಸ್ ಆರ್ ಟಿಸಿ ಬಸ್ಸೊಂದು ಕಾರು ಹಾಗೂ ಟ್ರ್ಯಾಕ್ಟರ್ ಗೆ ಢಿಕ್ಕಿ ಹೊಡೆದು ಬಸ್ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ದೇವನಹಳ್ಳಿ ತಾಲೂಕಿನ ಚಿಕ್ಕಸಣ್ಣೆ ಗೇಟ್ ಬಳಿ ನಡೆದಿದೆ.

Advertisement

ಘಟನೆ ಆಗಿದ್ದೇಗೆ ? :

ಬೆಂಗಳೂರಿನಿಂದ ತಿರುಪತಿಗೆ ತೆರಳುತ್ತಿದ್ಧ ಕೆಎಸ್ ಆರ್ ಟಿ ಸಿ ಬಸ್ ದೇವನಹಳ್ಳಿ ತಾಲೂಕಿನ ಚಿಕ್ಕಸಣ್ಣೆ ಗೇಟ್ ಬಳಿ ಕಾರೊಂದಕ್ಕೆ ಢಿಕ್ಕಿ ಹೊಡೆದು ಬಳಿಕ ಕಲ್ಲಿನ ಲೋಡ್ ತುಂಬಿಕೊಂಡು ಪಂಕ್ಚರ್ ಆಗಿ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ಗಂಬೀರ ಗಾಯಗೊಂಡಿದ್ದಾನೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದು ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಬಸ್ ಢಿಕ್ಕಿ ಹೊಡೆದ ಕಾರಿನಲ್ಲಿ  ತೆಲಂಗಾಣ ರಾಜ್ಯದ ಪೊಲೀಸ್ ಗುಪ್ತಚರ ಇಲಾಖೆ ಡಿಸಿಪಿ ಮತ್ತವರ ಕುಟುಂಬವರು ಪ್ರಯಾಣಿಸುತ್ತಿದ್ದರು.

Advertisement

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next