Advertisement

ಕೆಎಸ್‌ಓಯು ಪ್ರವೇಶ ಸೆ.30ರವರೆಗೆ ವಿಸ್ತರಣೆ

11:45 PM Sep 21, 2019 | Team Udayavani |

ಬೆಂಗಳೂರು: ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರಸಕ್ತ 2019-20ನೇ ಶೈಕ್ಷಣಿಕ ಸಾಲಿಗೆ ಯುಜಿಸಿ ಮಾನ್ಯತೆಯೊಂದಿಗೆ ಪ್ರಥಮ ವರ್ಷದ ಪ್ರವೇಶಾತಿ ದಿನಾಂಕವನ್ನು ದಂಡ ಶುಲ್ಕ ರದ್ದು ಮಾಡಿ ಸೆ.30ರವರೆಗೆ ದಿನಾಂಕ ವಿಸ್ತರಿಸಿದೆ.

Advertisement

ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಾದ ಬಿಎ, ಬಿಕಾಂ, ಎಂಎ, ಎಂಸಿಜೆ, ಎಂಕಾಂ, ಬಿಎಲ್‌ಐಎಸ್ಸಿ, ಎಂಎಲ್‌ಐಎಸ್ಸಿ, ಎಂಎಸ್ಸಿ, ಪಿಜಿ ಡಿಪ್ಲೋಮಾ ಪ್ರೋಗ್ರಾಮ್‌, ಡಿಪ್ಲೋಮಾ ಪ್ರೋಗ್ರಾಮ್‌, ಸರ್ಟಿಫಿಕೇಟ್‌ ಪ್ರೋಗ್ರಾಮ್‌ಗಳಿಗೆ ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿದೆ. ಕರಾಮುವಿವಿ ಮಲ್ಲೇಶ್ವರಂನ ಮಹಿಳಾ ಪ್ರಾದೇಶಿಕ ಕೇಂದ್ರದಲ್ಲಿ ಮಹಿಳಾ-ಪುರುಷರ ಪ್ರವೇಶಾತಿಗೆ ಅವಕಾಶ ಕಲ್ಪಿಸಿದೆ.

ದ್ವಿತೀಯ ಬಿಎ, ಬಿಕಾಂ, ಅಂತಿಮ ಎಂಎ, ಎಂಸಿಜೆ, ಎಂಕಾಂ ಪ್ರವೇಶಾತಿಗೆ 200ರೂ. ದಂಡ ಶುಲ್ಕದೊಂದಿಗೆ ಅ.10 ಹಾಗೂ 400ರೂ., ದಂಡ ಶುಲ್ಕದೊಂದಿಗೆ ಅ.25 ವರೆಗೂ ಪ್ರವೇಶಾತಿ ಪಡೆಯಬಹುದು ಎಂದು ಪ್ರಾದೇಶಿಕ ನಿರ್ದೇಶಕರಾದ ಡಾ.ಆರ್‌.ಲೋಕೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ.080 23448811, 9844506629, 9620395584, 7760848564ಕ್ಕೆ ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next