Advertisement

KSCA T20 tournament; ನಾಳೆಯಿಂದ ಮಹಾರಾಜಾ ಟ್ರೋಫಿ

11:53 PM Aug 11, 2023 | Team Udayavani |

ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹಾರಾಜಾ ಟ್ರೋಫಿಗಾಗಿ ಕೆಎಸ್‌ಸಿಎ ಟಿ20 ಪಂದ್ಯಾವಳಿಯ ಎಲ್ಲ ಪಂದ್ಯಗಳು ನಡೆಯಲಿವೆ. ಆ. 13ರಿಂದ 29ರ ವರೆಗೆ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಶನ್‌ (ಕೆಎಸ್‌ಸಿಎ) ತಿಳಿಸಿದೆ.

Advertisement

ಟಿಸಿಎಂ ನ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಪ್ರೈ. ಲಿ. ಈ ಪಂದ್ಯಾವಳಿಯನ್ನು ನಿರ್ವಹಿಸಲಿದ್ದು ಸ್ಟಾರ್‌ ನ್ಪೋರ್ಟ್ಸ್ 2, ಸ್ಟಾರ್‌ ನ್ಪೋರ್ಟ್ಸ್ ಕನ್ನಡ ಮತ್ತು ಒಟಿಟಿ ಪಾಲುದಾರ ಪ್ಯಾನ್‌ಕೋಡ್‌’ನಲ್ಲಿ ಪಂದ್ಯಗಳು ಪ್ರಸಾರವಾಗಲಿವೆ. ಆರು ಫ್ರಾಂಚೈಸಿಗಳಾದ ಬೆಂಗಳೂರು ಬ್ಲಾಸ್ಟರ್, ಮೈಸೂರು ವಾರಿಯರ್, ಗುಲ್ಬರ್ಗಾ ಮಿಸ್ಟಿಕ್ಸ್‌, ಹುಬ್ಬಳ್ಳಿ ಟೈಗರ್, ಶಿವಮೊಗ್ಗ ಲಯನ್ಸ್‌ ಮತ್ತು ಮಂಗಳೂರು ಡ್ರ್ಯಾಗನ್ಸ್‌ ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next