Advertisement

ಮಾನನಷ್ಟ ಮೊಕದ್ದಮೆ ಪ್ರಕರಣ: ಈಶ್ವರಪ್ಪಗೆ ಜಾಮೀನು ಮಂಜೂರು

07:50 AM Nov 30, 2017 | Team Udayavani |

ಶಿವಮೊಗ್ಗ: ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಅವರಿಗೆ ಇಲ್ಲಿನ ಎರಡನೇ ಜೆಎಂಎಫ್‌ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದೆ.

Advertisement

ವಕೀಲರೊಬ್ಬರು ತಮ್ಮನ್ನು ಬ್ಲ್ಯಾಕ್ ಮೇಲ್  ಮಾಡುತ್ತಿದ್ದಾರೆ ಎಂದು ಕೆ.ಎಸ್‌.ಈಶ್ವರಪ್ಪ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಈಶ್ವರಪ್ಪರವರು ತಮ್ಮನ್ನು ಬ್ಲ್ಯಾಕ್ ಮೇಲ್ರ್‌ ಎಂದು ಕರೆದು ಮಾನಹಾನಿ ಮಾಡಿದ್ದಾರೆಂದು ವಕೀಲ ವಿನೋದ್‌ ಜೂ.29ರಂದು ಶಿವಮೊಗ್ಗ ಜೆಎಂಎಫ್‌ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದರು. ಇದಕ್ಕೆ ಸಂಬಂಧಿಸಿ
ಬುಧವಾರ ಈಶ್ವರಪ್ಪ ವಿಚಾರಣೆಗೆ ಹಾಜರಾಗಿದ್ದರು.ಈಶ್ವರಪ್ಪ ಪರವಾಗಿ ವಕೀಲ ಜಿ.ಆರ್‌. ರಾಘವೇಂದ್ರ
ಜಾಮೀ ನಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಎರಡನೇ ಜೆಎಂಎಫ್‌ಸಿ ನ್ಯಾ.ಹೊಂಬಣ್ಣ ಜಾಮೀನು
ಮಂಜೂರು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next