Advertisement

ವಿಮಾನ ನಿಲ್ದಾಣದಲ್ಲಿ ಕೃಣಾಲ್‌ ವಿಚಾರಣೆ

10:52 PM Nov 12, 2020 | mahesh |

ಮುಂಬಯಿ: ಐಪಿಎಲ್‌ ಮುಗಿಸಿ ದುಬಾೖಯಿಂದ ಮರಳುವಾಗ ಮುಂಬೈ ತಂಡದ ಆಟಗಾರ ಕೃಣಾಲ್‌ ಪಾಂಡ್ಯ ಅವರನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಆದಾಯ ಗುಪ್ತಚರ ಮಹಾನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ತಡೆದು ವಿಚಾರಣೆ ನಡೆಸಿದ ಘಟನೆ ಗುರುವಾರ ಸಂಭವಿಸಿದೆ. ಹೆಚ್ಚುವರಿ ಮೊತ್ತದ ಚಿನ್ನ ಹಾಗೂ ಇತರ ಬೆಲೆಬಾಳುವ ವಸ್ತುವನ್ನು ಹೊಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸುಂಕ ಪಾವತಿಸಲು ಸೂಚಿಸಲಾಗಿದೆ.

Advertisement

ಸರಕಾರದ ನಿಯಮದಂತೆ, ದುಬಾೖಯಿಂದ ಮರಳುವ ಪುರುಷ ಪ್ರಯಾಣಿಕರು 50 ಸಾವಿರ ರೂ. ಮೊತ್ತದ ಚಿನ್ನಾಭರಣಗಳನ್ನಷ್ಟೇ ಸುಂಕ ರಹಿತವಾಗಿ ತರಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next