Advertisement

ಕೆಪಿಎಲ್‌ಗ‌ೂ ಬೆಟ್ಟಿಂಗ್‌ ಬಿಸಿ?

09:29 AM Sep 22, 2019 | mahesh |

ಬೆಂಗಳೂರು: ದೊಡ್ಡ ದೊಡ್ಡ ಮಟ್ಟದ ಕ್ರಿಕೆಟ್‌ ಸರಣಿಗಳಲ್ಲಿ ಕೇಳಿಬರುತ್ತಿದ್ದ ಬೆಟ್ಟಿಂಗ್‌ ಭೂತ ಈಗ ಕರ್ನಾಟಕ ಪ್ರೀಮಿಯರ್‌ ಲೀಗ್‌ಗೂ ಅಂಟಿಕೊಂಡಿದೆ. ಕೆಪಿಎಲ್‌ ಪಂದ್ಯಾವಳಿಗಳಲ್ಲಿ ಫಿಕ್ಸಿಂಗ್‌ ನಡೆದು ಭಾರೀ ಪ್ರಮಾಣದ ಬೆಟ್ಟಿಂಗ್‌ ನಡೆದಿದೆ ಎಂಬ ಆರೋಪ ಸಂಬಂಧ ಬೆಳಗಾವಿ ಪ್ಯಾಂಥರ್ಸ್‌ ತಂಡದ ಮಾಲಕ ಅಲಿ ಅಶ್ಫಾಕ್‌ ತಹ್ರಾ ಅವರನ್ನು ಸಿಸಿಬಿ ಪೊಲೀಸರು ಶುಕ್ರವಾರ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

Advertisement

ಸಿಸಿಬಿ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಎಸಿಪಿ ರಾಮಚಂದ್ರಯ್ಯ ನೇತೃತ್ವದ ತಂಡ ತೀವ್ರ ವಿಚಾರಣೆಗೊಳಪಡಿಸಿದೆ. ವಿಚಾರಣೆ ವೇಳೆ ಅಲಿ ನೀಡಿರುವ ಕೆಲವು ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಶನಿವಾರವೂ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿ ಕಳುಹಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

ಕೆಎಸ್‌ಸಿಎ ಸಹಕಾರಕ್ಕೆ ಮನವಿ
ಬೆಟ್ಟಿಂಗ್‌ ಹಾಗೂ ಇತರ ತಂಡಗಳ ಜತೆಯೂ ಅವರು ನಿಕಟ ಸಂಪರ್ಕ ಹೊಂದಿದ್ದರು ಎಂಬ ಆರೋಪದ ಮೇರೆಗೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಪ್ರಕರಣ ಸಂಬಂಧ ಕೂಲಂಕಷ ತನಿಖೆಯ ಅಗತ್ಯವಿದ್ದು ಕರ್ನಾಟಕ ರಾಜ್ಯ ಕ್ರಿಕೆಟ್‌ ಅಕಾಡೆಮಿ ( ಕೆಎಸ್‌ಸಿಎ) ಹಾಗೂ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳ ವಿಭಾಗದ ಸಹಕಾರ ಕೋರಲಾಗುವುದು ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಷ್ಟೇ ತನಿಖೆ ಆರಂಭಿಸಲಾಗಿದೆ. ಇದಲ್ಲದೆ, ಐಪಿಎಲ್‌, ತಮಿಳು ನಾಡು ಪ್ರೀಮಿಯರ್‌ ಲೀಗ್‌ ಸೇರಿದಂತೆ ಇತರ ಪಂದ್ಯಾವಳಿ ಗಳಲ್ಲಿಯೂ ಬೆಟ್ಟಿಂಗ್‌ ನಡೆದಿರುವ ಬಗ್ಗೆ ತನಿಖೆ ನಡೆಸಲಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಮನೀಶ್‌ ಪಾಂಡೆ, ರವಿಕುಮಾರ್‌ ಸಮರ್ಥ್, ಕೌನಿಯನ್‌ ಅಬ್ಟಾಸ್‌ ಸಹಿತ ಹಲವು ಆಟಗಾರರು ಈ ತಂಡದ ಪರ ಆಡುತ್ತಿದ್ದಾರೆ.

Advertisement

ಯಾರೀ ಅಲಿ?
ಬೆಂಗಳೂರು ಮೂಲದ ಉದ್ಯಮಿ ಅಲಿ ಅಶ್ಫಾಕ್‌ ತಹ್ರಾ, ಅಲಿ ಟೂರ್ ಆ್ಯಂಡ್‌ ಟ್ರಾವೆಲ್ಸ್‌ ಮಾಲಕರಾಗಿದ್ದಾರೆ. 2017ರಲ್ಲಿ ಬೆಳಗಾವಿ ಪ್ಯಾಂಥರ್ಸ್‌ ತಂಡವನ್ನು ಖರೀದಿಸಿ ಮಾಲಕತ್ವ ತಮ್ಮದಾಗಿಸಿಕೊಂಡಿದ್ದರು. ಅದೇ ವರ್ಷ ಕೆಪಿಎಲ್‌ ಟೂರ್ನಿಯಲ್ಲಿ ಬೆಳಗಾವಿ ಪ್ಯಾಂಥರ್ಸ್‌ ಟ್ರೋಪಿ ಗೆದ್ದಿತ್ತು ಎಂದು ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next