Advertisement

ಕೆಪಿಎಲ್‌: ಮೈಸೂರು ವಾರಿಯರ್ಸ್‌ಗೆ ಜೆ.ಸುಚಿತ್‌ ನಾಯಕ

07:00 AM Aug 10, 2018 | Team Udayavani |

ಮೈಸೂರು: ಆ.15ರಿಂದ ಆರಂಭವಾಗಲಿರುವ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಕ್ರಿಕೆಟ್‌ ಪಂದ್ಯಾವಳಿಗೆ ಸೈಕಲ್‌ ಪ್ಯೂರ್‌ ಅಗರಬತ್ತೀಸ್‌ ತಯಾರಕರಾದ ಎನ್‌.ಆರ್‌.ಸಮೂಹ ಒಡೆತನದ ಮೈಸೂರು ವಾರಿಯರ್ಸ್‌ ತನ್ನ ತಂಡವನ್ನು ಪ್ರಕಟಿಸಿದೆ.

Advertisement

ಗುರುವಾರ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ 7ನೇ ಆವೃತ್ತಿಯ ಪಂದ್ಯಾವಳಿಗೆ ಆಯ್ಕೆ ಮಾಡಲಾಗಿರುವ 18 ಆಟಗಾರರನ್ನು ತಂಡದ ಮಾಲೀಕ ಅರ್ಜುನ್‌ ರಂಗಾ ಪರಿಚಯಿಸಿದರು.ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವೆಂಕಟೇಶ್‌ ಪ್ರಸಾದ್‌ ಅವರು ಮೆಂಟರ್‌ ಆಗಿ ಮಾರ್ಗದರ್ಶನ ಮಾಡುತ್ತಿರುವ ಮೈಸೂರು ವಾರಿಯರ್ಸ್‌ ತಂಡದ ನಾಯಕನಾಗಿ ಜೆ.ಸುಚಿತ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಜೊತೆಗೆ ಮೈಸೂರು ವಾರಿಯರ್ಸ್‌ ಇತ್ತೀಚೆಗೆ ನಡೆಸಿದ ಪ್ರತಿಭಾನ್ವೇಷಣೆಯಲ್ಲಿ ಆಯ್ಕೆಮಾಡಲಾಗಿರುವ ಕಿಶನ್‌ ಬೆಡಾರೆ ಮತ್ತು ಗೌತಮ್‌ ಸಾಗರ್‌ ಇಬ್ಬರೂ ಹೊಸ ಮುಖಗಳನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ತಂಡ ಹೀಗಿದೆ: ಅಮಿತ್‌ ವರ್ಮ, ಕೆ.ಗೌತಮ್‌, ಜೆ.ಸುಚಿತ್‌ (ನಾಯಕ), ರಾಜೂ ಭಟ್ಕಳ್‌, ಬಿ.ಎನ್‌.ಭರತ್‌, ಎಸ್‌.ಪಿ.ಮಂಜುನಾಥ್‌, ಶೋಯಬ್‌ ಮ್ಯಾನೇಜರ್‌, ಅರ್ಜುನ್‌ ಹೊಯ್ಸಳ, ಕೆ.ವಿ.ಸಿದ್ಧಾರ್ಥ, ಪ್ರತೀಕ್‌ ಜೈನ್‌, ವೈಶಾಖ್‌ ವಿಜಯಕುಮಾರ್‌, ಶರತ್‌ ಶ್ರೀನಿವಾಸ್‌, ಮನೋಜ್‌ ಕೆ.ಎಚ್‌., ಕುಶಾಲ್‌ ವಾಧ್ವಾನಿ, ಲವ್‌ನಿತ್‌ ಸಿಸೋಡಿಯಾ, ವಿನಯ್‌ ಸಾಗರ್‌, ಕಿಶನ್‌ ಬೆಡಾರೆ, ಗೌತಮ್‌ ಸಾಗರ್‌.

Advertisement

Udayavani is now on Telegram. Click here to join our channel and stay updated with the latest news.

Next