Advertisement

ಕೆಪಿಎಲ್‌: ಫಿಕ್ಸಿಂಗ್‌ ತಡೆಗೆ ಬಿಸಿಸಿಐ ತಂಡ

06:00 AM Aug 04, 2018 | Team Udayavani |

ಹುಬ್ಬಳ್ಳಿ: ಮ್ಯಾಚ್‌ಫಿಕ್ಸಿಂಗ್‌ ಸಮಸ್ಯೆ ಕೆಪಿಎಲ್‌ನಲ್ಲೂ ಕಾಣಿಸಿಕೊಳ್ಳಬಾರದು ಎಂಬ ಕಾರಣದಿಂದ ಬಿಸಿಸಿಐ ಭ್ರಷ್ಟಾಚಾರ ನಿಗ್ರಹದಳ ಕೂಟದ ವೇಳೆ ಕಾರ್ಯ ನಿರ್ವಹಿಸಲಿದೆ. ನಿಗ್ರಹದಳದ ಕಾರ್ಯದರ್ಶಿ ರವಿ ಸವಾನಿ ಇದರ ನೇತೃತ್ವ ವಹಿಸಲಿದ್ದಾರೆ ಎಂದು ಕೆಎಸ್‌ಸಿಎ ಸಹ ಕಾರ್ಯದರ್ಶಿ ಸಂತೋಷ ಮೆನನ್‌ ತಿಳಿಸಿದ್ದಾರೆ.

Advertisement

ಪಂದ್ಯಾವಳಿ ವೇಳೆ ಮ್ಯಾಚ್‌ ಫಿಕ್ಸಿಂಗ್‌ ನಡೆಯದಂತೆ ತೀವ್ರ ನಿಗಾ ವಹಿಸಲಾಗುವುದು. ಅದಕ್ಕಾಗಿ ಆ. 13 ಮತ್ತು 14ರಂದು ಬೆಂಗಳೂರಿನಲ್ಲಿ ಎಲ್ಲ ಆಟಗಾರರು, ಸಿಬಂದಿ ಹಾಗೂ ಆಯೋಜಕರಿಗೆ ತರಬೇತಿ ನೀಡಲಾಗುವುದು. ಪಂದ್ಯಗಳ ವೇಳೆ ಫಿಕ್ಸಿಂಗ್‌, ಬೆಟ್ಟಿಂಗ್‌ ನಡೆಯದಂತೆ ಭ್ರಷ್ಟಾಚಾರ ನಿಗ್ರಹ ದಳ ಮೈದಾನದ ಸುತ್ತಲೂ ತೀವ್ರ ಕಣ್ಗಾವಲು ವಹಿಸಲಿದ್ದು, ಒಟ್ಟು 8 ತನಿಖಾಧಿಕಾರಿಗಳು ನಿಗಾ ವಹಿಸಲಿದ್ದಾರೆ. ಐಪಿಎಲ್‌ ಹಾಗೂ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಕೈಗೊಳ್ಳುವ ಕಟ್ಟುನಿಟ್ಟಿನ ನಿಯಮ ಗಳನ್ನು ಕೆಪಿಎಲ್‌ನಲ್ಲೂ ಅನುಸರಿಸ ಲಾಗುವುದು ಎಂದರು.  

ಗೋಷ್ಠಿಯಲ್ಲಿ ಹುಬ್ಬಳ್ಳಿ ಟೈಗರ್ಸ್‌ ಕ್ರಿಕೆಟ್‌ ತಂಡದ ನಾಯಕ ವಿನಯ ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next