Advertisement

ವಾಜಪೇಯಿಯನ್ನು ಭೇಟಿಯಾಗಿ ಆಶೀರ್ವಾದ ಕೋರಿದ ರಾಮ ನಾಥ್‌ ಕೋವಿಂದ್‌

12:33 PM Jun 22, 2017 | udayavani editorial |

ಹೊಸದಿಲ್ಲಿ : ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ ನಾಥ್‌ ಕೋವಿಂದ್‌ ಅವರಿಂದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಕೋರಿದರು. 

Advertisement

ವಾಜಪೇಯಿ ನಿವಾಸದಲ್ಲಿನ ಭೇಟಿಯ ಸಂದರ್ಭದಲ್ಲಿ ಕೋವಿಂದ್‌ ಅವರ ಜತೆಗೆ ಅವರ ಪತ್ನಿ ಕೂಡ ಇದ್ದರು. 

ಕೋವಿಂದ್‌ ಅವರು ಈ ಮೊದಲು ಬಿಜೆಪಿ ಹಿರಿಯ ನಾಯಕ ಎಲ್‌ ಕೆ ಆಡ್ವಾಣಿ ಮತ್ತು ಮುರಳಿ ಮನೋಹರ್‌ ಜೋಷಿ ಅವರನ್ನೂ ಭೇಟಿಯಾಗಿದ್ದರು. 

ಬಿಹಾರದ ರಾಜ್ಯಪಾಲರಾಗಿದ್ದ ರಾಮ ನಾಥ್‌ ಕೋವಿಂದ್‌ ಅವರನ್ನು ಎನ್‌ಡಿಯ ರಾಷ್ಟ್ರಪತಿ ಹುದ್ದೆಗೆ ತನ್ನ ಅಭ್ಯರ್ಥಿಯಾಗಿ ಈ ವಾರದ ಆದಿಯಲ್ಲಿ ಆಯ್ಕೆ ಮಾಡಿತ್ತು. ಕೋವಿಂದ್‌ ಅವರು ದಿಲ್ಲಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ  ವಕೀಲ ವೃತ್ತಿ ನಡೆಸಿದವರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next