Advertisement

ಸೋಂಕಿತನ ಸಂಪರ್ಕ: ನಾಲ್ವರಿಗೆ ಗೃಹಬಂಧನ

12:43 PM Jul 03, 2020 | Naveen |

ಕೊಟ್ಟಿಗೆಹಾರ: ಮುಂಬೈ ಮೂಲದ ಬಣಕಲ್‌ನ ಗುಡ್ಡಟ್ಟಿಯ ಕೋವಿಡ್ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ವರಿಗೆ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದ್ದು, ಬಣಕಲ್‌ ಗ್ರಾಪಂ ಪಿಡಿಒ ಕೃಷ್ಣಪ್ಪ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದರು.

Advertisement

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಕೃಷ್ಣಪ್ಪ ಅವರು, ಗುಡ್ಡಟ್ಟಿಯ ಕೋವಿಡ್ ಸೋಂಕಿತನ ಕುಟುಂಬದ ಮೂವರು ಸದಸ್ಯರನ್ನು ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ. ಸೋಂಕಿತ ವ್ಯಕ್ತಿಯನ್ನು ಮಂಗಳೂರಿನಿಂದ ಬಣಕಲ್‌ಗೆ ಕರೆತರಲು ಹೋಗಿದ್ದ ಬಣಕಲ್‌ನ ಶಾಂತಿನಗರದ ವಾಹನ ಚಾಲಕನಿಗೂ ಹೋಂ ಕ್ವಾರಂಟೈನ್‌ ನಲ್ಲಿರಲು ಸೂಚಿಸಲಾಗಿದೆ. ಗುಡ್ಟಟ್ಟಿಯ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಸೋಡಿಯಂ ಹೈಪೋ ಕ್ಲೋರೈಡ್‌ ಔಷಧ ಸಿಂಪಡಣೆ ಮಾಡಲಾಗಿದೆ ಎಂದರು.  ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು, ಆರೋಗ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next