Advertisement

ಕೋಟೇಶ್ವರ ಹಿಂದೂ ರುದ್ರಭೂಮಿ: ದುರಸ್ತಿಗೆ ಗ್ರಾಮಸ್ಥರ ಆಗ್ರಹ

07:00 AM Jul 22, 2018 | Team Udayavani |

ಕೋಟೇಶ್ವರ: ದುಸ್ತಿತಿಯಲ್ಲಿರುವ ಕೋಟೇಶ್ವರದ ಹಿಂದೂ ರುದ್ರಭೂಮಿಯ ಸುಸ್ಥಿತಿಗೆ ಕಾಲ ಕೂಡಿ ಬರದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ರುದ್ರಭೂಮಿಯ ವಿಶ್ರಾಂತಿ ಪಡೆಯುವ ವಿಶ್ರಾಂತಿ ಕಟ್ಟಡದ ಮೇಲ್ಛಾಣಿ ಸಹಿತ ಅಲ್ಲಿನ ಕಟ್ಟಡದ ಹಲವು ಭಾಗಗಳು ಅಂಪೂರ್ಣ ಶಿಥಿಲಗೊಂಡಿವೆ. ಇದರಿಂದಾಗಿ ಶವ ಸಂಸ್ಕಾರಕ್ಕೆ ಬರುವ ಮಂದಿ ಹಲವು ತೊಂದರೆಗಳನ್ನು ರುದ್ರಭೂಮಿಯಲ್ಲಿ ಎದು ರಿಸುತ್ತಿದ್ದಾರೆ.ದಹನ ಕ್ರಿಯೆ ಮಾಡುವ ಛೇಂಬರ್‌ ಪೂರ್ಣವಾಗಿ ತುಕ್ಕುಹಿಡಿದು ಹಾಳಾಗಿರುವುದರಿಂದ ಶವ ಸಂಸ್ಕಾರದ ವೇಳೆ ತೊಂದರೆಯಾಗುತ್ತಿದೆ.

1ನೇ ಘಟಕವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಅನಂತರ ರುದ್ರಭೂಮಿಗೆ ದಾನಿಯೊಬ್ಬರು ಸಿಲಿಕಾನ್‌ ಛೇಂಬರ್‌   ನೆರವು ನೀಡಿದ್ದರು. ಈಗ ಆ ಸಿಲಿಕಾನ್‌ ಚೇಂಬರ್‌ ಕೂಡ ಹಾಳಾಗಿರುವ ಕಾರಣ ಮತ್ತೆ ರುದ್ರಭೂಮಿ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಆದುದರಿಂದ  ಶೀಘ್ರ ದುರಸ್ತಿ ನಡೆಸಬೇಕು ಎನ್ನುತ್ತಾರೆ ಗ್ರಾಮಸ್ಥರು.

ರುದ್ರಭೂಮಿಯ ದುರಸ್ತಿಗೆ ಗ್ರಾ.ಪಂ. ಈ ಹಿಂದೆ ಅನುದಾನ ನೀಡಿತ್ತು. ಗ್ರಾಮಸ್ಥರು ಪಂಚಾಯತ್‌ಗೆ ದೂರು ನೀಡಿದರೆ ಕ್ರಿಯಾ ಯೋಜನೆಯಲ್ಲಿ ಆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆ ಜಾನಕಿ ಬಿಲ್ಲವ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next