Advertisement

ಕೋಟ ಗ್ರಾ.ಪಂ.: ಉದ್ಯೋಗ ಖಾತ್ರಿ ಕಾಮಗಾರಿ ವೀಕ್ಷಣೆ

10:03 PM May 18, 2020 | Sriram |

ಕೋಟ: ಕೋಟ ಗ್ರಾ.ಪಂ. ವ್ಯಾಪ್ತಿಯ ಮೂರು ಕಡೆ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ತೋಡು, ಕೆರೆ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಲ್ಲಿನ ಮಣೂರು ಗ್ರಾಮದ ಚಿತ್ತಾರಿ ನಾಗಬ್ರಹ್ಮ ದೇವಸ್ಥಾನದ ಸಮೀಪದ ಕೆರೆ ಹೂಳು ತೆಗೆಯುವ ಕಾಮಗಾರಿಯನ್ನು ರವಿವಾರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಮಾತನಾಡಿದ ಸಚಿವರು. ವಾರಾಹಿ ನೀರನ್ನು ಕೋಟಕ್ಕೆ ತರುವ ಪ್ರಯತ್ನ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಕ್ರಿಯಾ ಯೋಜನೆ ಸಿದ್ದವಾಗಿದೆ. ಇಲ್ಲಿನ ವರುಣ ತೀರ್ಥ ಕೆರೆಗೆ ನೀರು ತುಂಬಿಸುವುದರ ಮೂಲಕ ಇತರ ಕೆರೆಗಳಿಗೂ ಕಾಲುವೆಯ ಮೂಲಕ ಸಂಪರ್ಕಿಸಲಾಗುವುದು ಎಂದರು.ಕೋಟ ಗ್ರಾ.ಪಂ. ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್ಯ, ಸದಸ್ಯರಾದ ಚಂದ್ರ ಪೂಜಾರಿ, ಸಂತೋಷ ಪ್ರಭು, ಮಾಜಿ ಸದಸ್ಯ ಗೋಪಾಲ ಪೈ, ಸ್ಥಳೀಯರಾದ ವೇದಮೂರ್ತಿ ಮಣೂರು ಮಧುಸೂಧನ ಬಾಯರಿ, ಶ್ರೀಧರ ಆಚಾರ್ಯ, ಶಿಕ್ಷಕ ಶೇಖರ ಮೊದಲಾದವರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next