Advertisement

ಅನಗತ್ಯ ಬೈಕ್ ನಲ್ಲಿ ಸುತ್ತಾಡುವವರಿಂದ ಠಾಣೆ ಸ್ವಚ್ಛಗೊಳಿಸಿದ ಪೊಲೀಸ್ ಅಧಿಕಾರಿ

09:50 AM Mar 31, 2020 | keerthan |

ಕೊಪ್ಪಳ: ಜಿಲ್ಲಾ ಲಾಕ್ ಡೌನ್ ಇದ್ದರೂ ಅನಗತ್ಯ ಸುತ್ತಾಟ ನಡೆಸುವ ಬೈಕ್ ಸವಾರರನ್ನು ಹಿಡಿದ ಕೊಪ್ಪಳ ನಗರ ಪೊಲೀಸ್ ಠಾಣೆ ಅಧಿಕಾರಿ ಮೌನೇಶ್ವರ್ ಪಾಟೀಲ್ ಅವರು ಠಾಣೆ ಸ್ವಚ್ಛಗೊಳಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ.

Advertisement

ಜಿಲ್ಲೆಯಲ್ಲಿ ಲಾಕ್ ಡೌನ್ ಇದ್ದರೂ ಕೆಲವು ಯುವಕರು ಬೈಕ್ ನಲ್ಲಿ ಅನಗತ್ಯ ಸುತ್ತಾಟ ನಡೆಸುತ್ತಿದ್ದರು. ಅವರಿಗೆ ಪದೇ ಪದೆ ಹೇಳಿದರೂ ಕೇಳಲ್ಲಿಲ್ಲ. ಇದರಿಂದ ಪೊಲೀಸರು ಕೂಡಾ ರೋಸಿ ಹೋಗಿದ್ದರು. ಕೊನೆಗೆ ಅವರನ್ನು ಗುರುತಿಸಿ, ಸುಮಾರು 30 ಕ್ಕೂ ಹೆಚ್ಚು ಜನರನ್ನ ನಗರ ಠಾಣೆಗೆ ಕರೆತಂದು ಸುತ್ತಾಡಂತೆ ಎಚ್ಚರಿಕೆ ನೀಡಿದ್ದಾರೆ.

ಠಾಣೆಯ ಮೂಲೆಯಲ್ಲಿ ಸಂಗ್ರಹವಾಗಿದ್ದ ಕಸವನ್ನು ಯುವಕರಿಂದಲೇ ಸ್ವಚ್ಛಗೊಳಿಸುವ ಶಿಕ್ಷೆ ನೀಡಿದರು. ಠಾಣೆಯಲ್ಲಿನ ಕಸವನ್ನು ಸ್ವಚ್ಛಗೊಳಿಸಿ ನಂತರ ಮಾಸ್ಕ್ ಧರಿಸುವಂತೆ ಎಚ್ಚರಿಕೆ ನೀಡಿದ್ದಲ್ಲದೆ ಸುತ್ತಾಟ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next