Advertisement

ಶೀಘ್ರದಲ್ಲೇ ದೆಹಲಿ ಸಂಸತ್ತಿನಲ್ಲಿ ಕೊಂಕಣಿ ಭಾಷೆಗೆ ಭಾಷಾ ಅನುವಾದಕಾರ ನೇಮಕ: ಗೋವಾ ಸಿಎಂ

06:13 PM Jun 24, 2023 | Team Udayavani |

ಪಣಜಿ: ಕೊಂಕಣಿ ಭಾಷೆಗೆ ಉಜ್ವಲ ಭವಿಷ್ಯವಿದ್ದು, ಶೀಘ್ರದಲ್ಲೇ ದೆಹಲಿ ಸಂಸತ್ತಿನಲ್ಲಿ ಕೊಂಕಣಿ ಭಾಷೆಗೆ ಭಾಷಾ ಅನುವಾದಕಾರರನ್ನು  ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಹೇಳಿದ್ದಾರೆ.

Advertisement

ಕೊಂಕಣಿ ಮಹಾನ್ ವ್ಯಕ್ತಿ ಶಣೈ ಗೋಂಯ್‍ಬಾಬಾ ಅವರ 146ನೇ ಜನ್ಮ ದಿನಾಚರಣೆಯನ್ನು ಗೋವಾ ಬಿಚೋಲಿಯಲ್ಲಿ ಆಚರಿಸಲಾಯಿತು. ಉತ್ಸವವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಡಾ.ಸಾವಂತ್ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಶಣೈ ಗೊಂಯ್‍ಬಾಬ್ ಕೊಂಕಣಿಯ ಮಹಾನ್ ವ್ಯಕ್ತಿ. ಸರ್ಕಾರವು ಗೋವಾ ವಿಶ್ವವಿದ್ಯಾಲಯದಲ್ಲಿ ಶಣೈ ಗೋಯೆಂಕಾ ಭಾಷಾ ಮತ್ತು ಸಾಕ್ಷರತಾ ಶಾಲೆಯನ್ನು ಸ್ಥಾಪಿಸಿದೆ ಎಂದು ಮುಖ್ಯಮಂತ್ರಿ ಡಾ.ಸಾವಂತ್ ಹೇಳಿದರು. ಕೊಂಕಣಿ ಭಾಷೆಯನ್ನು ಜೀವಂತವಾಗಿಡಲು ಅವರು ಮಾಡಿದ ಕಾರ್ಯವನ್ನು ಇಂದಿನ ಪೀಳಿಗೆ ಅನುಸರಿಸಬೇಕು ಎಂದು ಅವರು ಮನವಿ ಮಾಡಿದರು.

ಗೋವಾ ಕೊಂಕಣಿ ಅಕಾಡೆಮಿ ಮತ್ತು ಡಿಚೋಲಿ ಲಯನ್ಸ್ ಕ್ಲಬ್ ಡಿಚೋಳಿ ಕೊಂಕಣಿ ಸೇವಾ ಕೇಂದ್ರದ ಸಹಯೋಗದಲ್ಲಿ ಹೀರಾಬಾಯಿ ಜಾಂಟಯೆ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಾಮೋದರ ಮಾವಜೋ ಮುಖ್ಯ ಭಾಷಣಕಾರರಾಗಿ, ಶಾಸಕ ಡಾ.ಚಂದ್ರಕಾಂತ್ ಶೇಟಯೆ , ಮಾಯೆ ಶಾಸಕ ಪ್ರೇಮೇಂದ್ರ ಶೇಟ್, ಮೇಯರ್ ಕುಂದನ್ ಫಲಾರಿ ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು. ಶಾಸಕರಾದ ಡಾ.ಚಂದ್ರಕಾಂತ್ ಶೇಟಯೆ, ಪ್ರೇಮೇಂದ್ರ ಶೇಟ್ ಅಭಿಪ್ರಾಯ ವ್ಯಕ್ತಪಡಿಸಿದರು. ಉತ್ಸವದ ಸ್ವಾಗತಾಧ್ಯಕ್ಷ ಪ್ರೊ.ಎಸ್.ಕೆ. ಪ್ರಕಾಶ ವಜ್ರಿಕರ ಸ್ವಾಗತಿಸಿದರು. ರೂಪೇಶ್ ಠಾಣೆಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಜಯ್ ಸಾಲೇಲ್ಕರ್ ಮತ್ತು ಸಾಗರ್ ಚಾರಿ ಕಾರ್ಯಕ್ರಮ ನಿರ್ವಹಿಸಿದರು. ಕೊಂಕಣಿ ಅಕಾಡೆಮಿಯ ಕಾರ್ಯದರ್ಶಿ ಮೇಘನಾ ಶೆಟಗಾಂವಕರ ವಂದಿಸಿದರು. ಸಮಾರೋಪ ಸಮಾರಂಭದಲ್ಲಿ 10 ಮತ್ತು 12ನೇ ಪರೀಕ್ಷೆಯಲ್ಲಿ ಕೊಂಕಣಿ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಾಮೋದರ್ (ಭಾಯಿ) ಮಾವ್ಜೋ ಅವರನ್ನು ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಸನ್ಮಾನಿಸಿದರು. ಮಹೇಶ ಕಡಕಡೆ (ಡಿಚೋಳಿ) ಮತ್ತು ಪ್ರೊ. ರಘುದಾಸ್ ತಾರಿ (ಸಖಾಲಿ) ಅವರನ್ನು ಸನ್ಮಾನಿಸಲಾಯಿತು.

Advertisement

ಇದನ್ನೂ ಓದಿ: ಗರಡಿಯಲ್ಲಿ ‘ಹಲಗಿ’ ಸದ್ದು ಜೋರು; ನಿಶ್ವಿ‌ಕಾ ಹಾಟ್‌ ಸ್ಟೆಪ್‌ ಗೆ ಫಿದಾ

Advertisement

Udayavani is now on Telegram. Click here to join our channel and stay updated with the latest news.

Next