Advertisement

ಕೊಕ್ಕಡ ವೈದ್ಯನಾಥೇಶ್ವರ ದೇವರ ಜಾತ್ರೆ, ಕಟ್ಟೆ ಪೂಜೆ

11:13 AM May 06, 2018 | |

ನೆಲ್ಯಾಡಿ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಸೀಮೆ ದೇವಸ್ಥಾನವಾಗಿರುವ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ಮತ್ತು ವಿಷ್ಣುಮೂರ್ತಿ ದೇವಸ್ಥಾನದ ಜಾತ್ರಾ ಮಹೋತ್ಸವ ಮೇ 2ರಂದು ಧ್ವಜಾರೋಹಣ ಮೂಲಕ ಆರಂಭವಾಗಿದ್ದು, ಶುಕ್ರವಾರ ಸಂಜೆ ಕೊಕ್ಕಡ ಪೇಟೆಯಲ್ಲಿ ದೇವರ ಮೆರವಣಿಗೆ ಸಾಗಿ, ಕಟ್ಟೆಪೂಜೆ ನೆರವೇರಿತು. ಸಂಜೆ 4 ಗಂಟೆಗೆ ಮೆರವಣಿಗೆ ಹೊರಟು, ಪಟ್ಲಡ್ಕದ ಶ್ರೀ ಗುರುದೇವ ಕಟ್ಟೆ ಮತ್ತು ಜೋಡುಮಾರ್ಗದ ಹರಿಹರ ಕಟ್ಟೆಯಲ್ಲಿ ಕಟ್ಟೆಪೂಜೆಗಳು ಮತ್ತು ಉತ್ಸವಾದಿಗಳು ನಡೆದವು. ದೇವಸ್ಥಾನದಲ್ಲಿ ಮಹಾಪೂಜೆ, ಭೂತಬಲಿಗಳು ನಡೆದವು. 

Advertisement

ನೀಲೇಶ್ವರ ಎಡಮನೆ ದಾಮೋದರ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದವು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ವಸಂತ ರಾವ್‌, ಸದಸ್ಯರಾದ ವಿಟ್ಠಲ ಗೌಡ ಟಿ., ಶ್ರೀಕಾಂತ ಆಚಾರ್ಯ, ಸುಚಿತ್ರಾ ಕೊಲ್ಲಾಜೆ, ಬಾಬು ಎಂ.ಕೆ., ರೋಹಿತಾಕ್ಷ ಆಚಾರ್ಯ, ಪದ್ಮಾ ಟಿ.ಎಂ., ಸೇಸಪ್ಪ ಸಾಲಿಯಾನ್‌, ಅರ್ಚಕರಾದ ರಮಾನಂದ ಭಟ್‌ ಮತ್ತು ಭಕ್ತರು ಭಾಗವಹಿಸಿದ್ದರು. 

ನಾಳೆ ಮಹಾರಥೋತ್ಸವ
ಮೇ 7ರಂದು ಬೆಳಗ್ಗೆ 8 ಗಂಟೆಗೆ ಉತ್ಸವ ಹೊರಟು ದರ್ಶನ ಬಲಿ, ಚಂದ್ರಮಂಡಲ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಉತ್ಸವ ಹೊರಟು ಶ್ರೀ ದೇವರ ಮಹಾರಥೋತ್ಸವ ನಡೆಯಲಿದೆ. ಜಾತ್ರೆ ಪ್ರಯುಕ್ತ ರಾತ್ರಿ 10ರಿಂದ ಶ್ರೀ ಮಂಗಳಾದೇವಿ ಮೇಳದವರಿಂದ ಯಕ್ಷಗಾನ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next