Advertisement

Kodiyalabailu: ಖೈಬರ್‌ಪಾಸ್‌ ರಸ್ತೆ ಮತ್ತೆ ಹೊಂಡಮಯ!

05:11 PM Sep 24, 2024 | Team Udayavani |

ಕೊಡಿಯಾಲಬೈಲು: ಪಿವಿಎಸ್‌ ಜಂಕ್ಷನ್‌-ಕೆ.ಎಸ್‌.ರಾವ್‌ ರಸ್ತೆಗಳ ನಡುವೆ ಸಂಪರ್ಕ ಕಲ್ಪಿಸುವ ಒಳರಸ್ತೆ ʼಖೈಬರ್‌ಪಾಸ್‌’ನಲ್ಲಿ ಮತ್ತೆ ಗುಂಡಿಗಳು ಉಂಟಾಗಿವೆ. ನಡೆಯುವುದಕ್ಕೂ ಅಯೋಗ್ಯವಾಗಿದ್ದ ಈ ರಸ್ತೆಗೆ ಸುಮಾರು ಒಂದು ತಿಂಗಳ ಹಿಂದೆ ಜಲ್ಲಿಕಲ್ಲುಗಳನ್ನು ಹಾಕಿ ಸಮತಟ್ಟುಗೊಳಿಸಲಾಗಿತ್ತು.

Advertisement

ಅನಂತರ ವಾಹನಗಳ ಓಡಾಟವೂ ಹೆಚ್ಚಾಗತೊಡಗಿತು. ಪರಿಣಾಮವಾಗಿ ಇದೀಗ ಹಲವೆಡೆ ಜಲ್ಲಿಕಲ್ಲುಗಳು ಕಿತ್ತು ಹೋಗಿ ಹೊಂಡಗಳುಂಟಾಗಿವೆ. ಮಳೆನೀರು ಆ ಹೊಂಡಗಳಲ್ಲಿ ನಿಂತಿದೆ. ವಾಹನಗಳ ಸಂಚಾರಕ್ಕೆ, ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ. ಒಳರಸ್ತೆಯಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸಹಿತ ಪಾದಚಾರಿಗಳು ಇದನ್ನು ಬಳಕೆ ಮಾಡುತ್ತಾರೆ. ಹಗಲು ರಾತ್ರಿಯೆನ್ನದೆ ಇದರಲ್ಲಿ ಸಂಚರಿಸುತ್ತಾರೆ. ಆದರೆ ಸದ್ಯ ವಾಹನಗಳ ಓಡಾಟವೂ ಹೆಚ್ಚಾಗಿದೆ. ಹಾಗಾಗಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಬೇಕಾದ ಅವಶ್ಯಕತೆ ಇದೆ. ಸಮರ್ಪಕವಾದ ಬೆಳಕಿನ ವ್ಯವಸ್ಥೆ ಕೂಡ ಆಗಬೇಕಿದೆ. ಈ ಹಿಂದೆ ದ್ವಿಚಕ್ರ ವಾಹನ ಮತ್ತು ಪಾದಚಾರಿಗಳ ಸಂಚಾರಕ್ಕೆ ಮಾತ್ರವೇ ಅವಕಾಶ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next