Advertisement

ವೀರರಾಣಿ ಚನ್ನಮ್ಮನ ಕಿತ್ತೂರ್ ಉತ್ಸವದ ವೀರಜ್ಯೋತಿಗೆ ಚಾಲನೆ

01:29 PM Oct 18, 2021 | Team Udayavani |

ಬೈಲಹೊಂಗಲ‌: ವೀರರಾಣಿ  ಚನ್ನಮ್ಮನ ಕಿತ್ತೂರ್ ಉತ್ಸವ 2021 ವೀರಜ್ಯೋತಿಗೆ ಪಟ್ಟಣ ಕಿತ್ತೂರ ಚನ್ನಮ್ಮ ಸಮಾಧಿ ಸ್ಥಳದ ರಸ್ತೆಯಲ್ಲಿ ಮೂರುಸಾವಿರಮಠದ ಪ್ರಭು ನೀಲಕಂಠ ಮಹಾಸ್ವಾಮೀಜಿ  ಚಾಲನೆ ನೀಡಿದರು.

Advertisement

ಮೂರುಸಾವಿರಮಠದ ಪ್ರಭು ನೀಲಕಂಠ ಮಹಾಸ್ವಾಮೀಜಿ ಮಾತನಾಡಿ,  ಸ್ವಾತಂತ್ರ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರ್ ಚೆನ್ನಮ್ಮಳ ಶೌರ್ಯಸಾಹಸ ಇಂದಿನ ಯುವಪೀಳಿಗೆ ಮೈಗೂಡಿಸಿಕೊಳ್ಳುವದು ಅತ್ಯಗತ್ಯವಾಗಿದೆ‌. ಸರಕಾರ ಈ ಬಾರಿ ಕಿತ್ತೂರ  ಉತ್ಸವವನ್ನು ರಜತ ಮಹೋತ್ಸವವನ್ನು ಅ.23, 24 ರಂದು ಆಯೋಜಿಸಿರುವದು ಶ್ಲಾಘನೀಯವಾದುದು ಎಂದರು.

ಕಿತ್ತೂರ್ ಚನ್ನಮ್ಮಳ ಹೋರಾಟ ಇತಿಹಾಸದಲ್ಲಿ ಅಜರಾಮರ. ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೂರು ದಶಕಗಳ ಮೊದಲೇ ಕಿತ್ತೂರ ಕ್ರಾಂತಿಯ ಮೂಲಕ ಸ್ವಾತಂತ್ರ್ಯದ ಕಿಡಿಯನ್ನು ಹಚ್ಚಿದ ರಾಣಿ ಚನ್ನಮ್ಮ ನಮ್ಮೆಲ್ಲರಿಗೂ ಪ್ರೇರಣಾ ಶಕ್ತಿ ಎಂದರು.

ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ ಮಾತನಾಡಿ,ಕಳೆದ ಎರಡು ವರ್ಷಗಳಿಂದ ಕೋರೋಣ ಮಹಾಮಾರಿ ಯಿಂದಾಗಿ  ಉತ್ಸವ ನಡೆಸಲು ಸಾಧ್ಯವಾಗಿರಲಿಲ್ಲ. ಉತ್ಸವ ನಡೆಸಬೇಕೆಂಬ ಚೆನ್ನಮ್ಮಾಜಿ ರಾಯಣ್ಣನ ಅಭಿಮಾನಿಗಳ ಕನಸು ಈ ವರ್ಷ ನನಸಾಗಲಿದೆ ಎಂದರು.

ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡ ಗೌಡರ ಮಾತನಾಡಿ, ಪ್ರತಿವರ್ಷ ಕಿತ್ತೂರು ಉತ್ಸವ ಅತಿ ವಿಜೃಂಭಣೆ ಯಿಂದ ನಡೆಸಲಾಗುತ್ತಿತ್ತು.ಆದರೆ ಮಹಾಮಾರಿ ಕೊರೋಣದ ಪ್ರಭಾವದಿಂದ ಕಳೆದ ಎರಡು ವರ್ಷಗಳಿಂದ ಉತ್ಸವವನ್ನು ಸಾಂಕೇತಿಕವಾಗಿ ಆಚರಿಸಲಾಗಿತ್ತು. ಆದರೆ ಈ ವರ್ಷ  ಕೋರೋಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಆದಕಾರಣ ಈ ವರ್ಷ ಕಿತ್ತೂರು ಉತ್ಸವ ನಡೆಸಲು ಸರಕಾರ ನಿರ್ಧರಿಸಿ ಎರಡು ದಿನದ ಉತ್ಸವಕ್ಕೆ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ.

Advertisement

ಆದರೆ ಇನ್ನು ಸಹ ಕೋರೋಣದ ಭಯ ಇರುವುದರಿಂದ ಉತ್ಸವದಲ್ಲಿ ಭಾಗವಹಿಸುವ ಸಾರ್ವಜನಿಕರು ಮಾಸ್ಕ್,ಧರಿಸಿ ಸರಕಾರದ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕೆಂದು ತಿಳಿಸಿದರು.

ಚನ್ನಮ್ಮಾ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಜ್ಯೋತಿಗೆ ಚಾಲನೆ ನೀಡಲಾಯಿತು. ನಂತರ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು. ಚೆನ್ನಮ್ಮ ವೃತ್ತದ ಮೂಲಕ ಅನಿಗೋಳ‌ಮಾರ್ಗವಾಗಿ ಜ್ಯೋತಿಯು ಮುಂದೆ ಸಾಗಿತು‌.

ಜ್ಯೋತಿ ಯಾತ್ರೆ ಚಾಲನೆ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶಶಿಧರ್ ಬಗಲಿ,ತಹಸೀಲ್ದಾರ್ ಬಸವರಾಜ್ ನಾಗರಾಳ, ಮಾಜಿ ಶಾಸಕ ಜಗದೀಶ್ ಮೆಟಗುಡ್ಡ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ್ ಸಂಪಗಾವಿ,ಪುರಸಭೆ ಅಧ್ಯಕ್ಷ ಬಾಬು ಕೂಡಸೋಮನ್ನವರ, ಪುರಸಭೆ ಮುಖ್ಯಾಧಿಕಾರಿ ಕವಿರಾಜ್ ನಾಗನೂರ, ಪುರಸಭೆ ಸದಸ್ಯ ರಾಜು ಜನ್ಮಟ್ಟಿ,ಗುರು ಮೆಟಗುಡ್ಡ,ಅರ್ಜುನ್ ಕಲಕುಟ್ಕರ್,ಕಂದಾಯ ನೀರಿಕ್ಷಕ ಸುರೇಶ ಮಾಳಗಿ , ಮಲ್ಲೇಶ ಹೊಸಮನಿ, ಡಾ.ಮಹಾಂತೇಶ ಕಳ್ಳಿಬಡ್ಡಿ, ಬಸವರಾಜ ಶಿಂತ್ರಿ, ಅಂಜನಾ ಬೊಂಗಾಳೆ, ಲೋಕೊಪಯೋಗಿ ಇಲಾಖೆ ಎಇ ಇ ವಿ.ಎಸ್.ಆನಿಕಿವಿ, ವಿವಿಧ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ವಿದ್ಯಾರ್ಥಿಗಳು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next