Advertisement

ಬಡವರಿಗೆ, ದಿವ್ಯಾಂಗರಿಗೆ ಕಿಟ್‌ ವಿತರಣೆ

05:12 PM Jun 23, 2021 | Team Udayavani |

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದಕಾಮಾಕ್ಷಿಪಾಳ್ಯ ದಲ್ಲಿ ಕೊರೊನಾ ದಿಂದ ಸಂಕಷ್ಟಕ್ಕೆಬಡವರಿಗೆ, ದಿವ್ಯಾಂಗರಿಗೆ ಇಂದು ಸ್ಥಳೀಯ ಕಾಂಗ್ರೆಸ್‌ಯುವ ಮುಖಂಡ ರಘುವೀರ್‌ ಎಸ್‌ ಗೌಡ ರವರುಉಚಿತ ದಿನಸಿ ಕಿಟ್‌ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಾರ್ಯಕ್ರಮಕ್ಕೆಮಾಗಡಿ ತಾಲೂಕು ಮಾಜಿಶಾಸಕರು ಹಾಗೂ ಕಾಂಗ್ರೆಸ್‌ ಮುಖಂಡರಾದ ಎಚ್‌.ಸಿ. ಬಾಲಕೃಷ್ಣ ರವರು ಆಗಮಿಸಿ ಫುಡ್‌ಕಿಟ್‌ ವಿತರಣೆ ಮಾಡುವ ಮೂಲಕಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮಹಾಮಾರಿ ಕೊರೊನ ಸೋಂಕಿನಿಂದಇಡೀ ದೇಶವೇ ಸಂಕಷ್ಟಕ್ಕೀಡಾಗಿದ್ದು, ಇಂಥ ಸಂದಿಗ್ಧಸ್ಥಿತಿಯಲ್ಲಿ ಸರ್ಕಾರ ಲಾಕ್‌ಡೌನ್‌ ಹೇರಿ ದುಡಿಯುವಕೈಗಳಿಗೆ ಕೆಲಸ ಇಲ್ಲದೆ ಒಂದು ಹೊತ್ತಿನ ಊಟಕ್ಕೂಕಷ್ಟಪಡುವ ಪರಸ್ಥಿತಿ ನಿರ್ಮಾಣವಾಗಿದೆ,

Advertisement

ಇದರಜೊತೆಗೆ ಕೋರೋನ ವಾರಿಯರ್ಷ್‌ ಗಳಾದ ಪೌರಕಾರ್ಮಿಕರು, ಬಡ ಹಾಗೂ ಮಧ್ಯಮ ವರ್ಗದಜನರಿಗೆ, ವಿಶೇಷ ಚೇತನರಿಗೆ ಒಂದು ವಾರ ಊಟಕ್ಕೆಆಗುವಷ್ಟು ರೇಷನ್‌ ಅಕ್ಕಿ, ಬೆಳೆ ಅಡುಗೆ ಎಣ್ಣೆಸೇರಿದ ದಿನಸಿ ಫುಡ್‌ ಕಿಟ್‌ ನೀಡುತ್ತಿರುವುದುಶ್ಲಾಘನೀಯ ಎಂದು ಯುವ ಮುಖಂಡರಘು ವೀರಗೌಡ ರನ್ನು ಶ್ಲಾ ಸಿದರು.ರಘುವೀರ ಗೌಡ ಮಾತನಾಡಿ, ಸಮಾಜಕ್ಕೆ ನಮ್ಮಕಡೆಯಿಂದ ಒಂದು ಸಣ್ಣ ಅಳಿಲು ಸೇವೆಯನ್ನುಮಾಡುವ ಕುರಿತು ಯೋಚಿಸಿ ಇಂದುಈಕಾರ್ಯಮಾಡುತ್ತಿದ್ದು, ಆರ್ಥಿಕ ವಾಗಿ ಸಬಲರು, ಉಳ್ಳವರುಮುಂದೆ ಬಂದು ನೆರವು ನೀಡಬೇಕು ಎಂದರು. ಪಕ್ಷದಹಿರಿಯ ಮುಖಂಡರುಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next