Advertisement

ಗ್ರಾಮೀಣರಿಗೆ ಗ್ರಾಪಂನಿಂದ ಕಿಟ್‌ ವಿತರಣೆ

05:26 PM Jun 11, 2021 | Team Udayavani |

ಕನಕಪುರ: ಕೊರೊನಾ ಸಂಕಷ್ಟದಲ್ಲಿದ್ದ ಗ್ರಾಮೀಣ ಜನರಿಗೆಗ್ರಾಪಂನಿಂದ ಸಂಸದ ಡಿ.ಕೆ.ಸುರೇಶ್‌ ಆಹಾರ ಕಿಟ್‌ವಿತರಣೆ ಮಾಡಿದರು.

Advertisement

ತಾಲೂಕಿನ ಕಸಬಾ ಹೋಬಳಿಯ ಹಳ್ಳಿಮಾರನಹಳ್ಳಿ ಗ್ರಾಪಂನಿಂದ ಜನರಿಗೆ ಆಹಾರ ಕಿಟ್‌ ವಿತರಿಸಿ ಮಾತನಾಡಿ,ಕೋವಿಡ್‌ದಿಂದ ಸಂಕಷ್ಟಕ್ಕೆ ಈಡಾಗೀರುವ ಜನರಿಗೆನೆರವಾಗುವ ಉದ್ದೇಶದಿಂದ ಗ್ರಾಪಂನಿಂದ ಉಚಿತವಾಗಿ ಆಹಾರ ಕಿಟ್‌ ನೀಡಲಾಗುತ್ತಿದೆ. ಅರ್ಹರಿಗೆ ನೆರವಾಗುವಉದ್ದೇಶದಿಂದ ಎಲ್ಲ ಗ್ರಾಪಂ ಸದಸ್ಯರು, ಅಧಿಕಾರಿಗಳು ತೀರ್ಮಾನಿಸಿ, ಪ್ರತಿಯೊಬ್ಬರಿಗೂ ದಿನಸಿ ಕಿಟ್‌ ವಿತರಣೆಮಾಡುತ್ತಿದ್ದಾರೆ. ಇದಕ್ಕೆ ದಾನಿಗಳು, ಸ್ಥಳೀಯ ಮುಖಂಡರುಸಹಾಯ ಮಾಡಿದ್ದಾರೆ ಎಂದರು.

ತಾಲೂಕಿನ ತುಂಗಣಿ, ಕಲ್ಲಹಳ್ಳಿ, ಚಿಕ್ಕಮುದುವಾಡಿ,ದೊಡ್ಡಮುದುವಾಡಿ, ಕೊಟ್ಟಗಾಳು, ಶಿವನಹಳ್ಳಿ, ಅಚ್ಚಲು,ಸಾತನೂರು, ಹೊನ್ನಿಗನಹಳ್ಳಿ, ನಲ್ಲಹಳ್ಳಿ, ಕಾಡಹಳ್ಳಿ, ಕಬ್ಟಾಳುಸೇರಿದಂತೆ ಸುಮಾರು 17 ಗ್ರಾಪಂ ವ್ಯಾಪ್ತಿಯ ಜನರಿಗೆಆಹಾರ ಕಿಟ್‌ ವಿತರಿಸಲಾಯಿತು.

ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಜಿಪಂ ಮಾಜಿಅಧ್ಯಕ್ಷ ಇಕ್ಬಾಲ್‌ ಹುಸೇನ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷವಿಜಯ್‌ ದೇವ್‌, ಆರ್‌.ಕೆ .ಕೃಷ್ಣಮೂರ್ತಿ, ಬಮೂಲ್‌ನಿರ್ದೇಶಕ ಹರೀಶ್‌ಕುಮಾರ್‌, ಹಾರೋಹಳ್ಳಿ ಬ್ಲಾಕ್‌ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next