Advertisement

Kishkinda Anjanadri; 41 ದಿನಗಳಲ್ಲಿ ಹುಂಡಿಯಲ್ಲಿ 20.36ಲಕ್ಷ ರೂ.ಕಾಣಿಕೆ ಸಂಗ್ರಹ

08:18 PM Dec 14, 2023 | Team Udayavani |

ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಸ್ಕಿಂದ ಅಂಜನಾದ್ರಿ ದೇವಸ್ಥಾನದ ಹುಂಡಿಯಲ್ಲಿ 20.36 ಲಕ್ಷ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಗುರುವಾರ ಧಾರ್ಮಿಕ ದತ್ತಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಹುಂಡಿಯ ಎಣಿಕೆಯನ್ನು ಮಾಡಲಾಯಿತು ಈ ಸಂದರ್ಭದಲ್ಲಿ ದೇಶ ವಿದೇಶದ ನಾಣ್ಯಗಳು ಮತ್ತು ನೋಟುಗಳು ಸೇರಿದಂತೆ ಭಕ್ತರು 41 ದಿನಗಳಲ್ಲಿ ಹಾಕಿದ ಭಕ್ತಿ ಕಾಣಿಕೆಯ ಹುಂಡಿ ಬೀಗ ತೆಗೆದು ಲೆಕ್ಕ ಹಾಕಲಾಯಿತು. ವಿದೇಶಿ ನೋಟು (ನೇಪಾಳ) ಮತ್ತು ಐದು ವಿದೇಶಿ ನಾಣ್ಯ ಹುಂಡಿಯಲ್ಲಿ ಸಂಗ್ರಹವಾಗಿರುತ್ತದೆ.ಕಳೆದ ತಿಂಗಳು ಹುಂಡಿಯಲ್ಲಿ 27,16,ಲಕ್ಷ ರೂ. ಕಾಣಿಕೆ ಗ್ರಹವಾಗಿತ್ತು.

Advertisement

ಈ ಸಂದರ್ಭದಲ್ಲಿ ತಹಸೀಲ್ದಾರ್ ವಿಶ್ವನಾಥ ಮುರಡಿ,ಮಹಾಂತಗೌಡ ಗೌಡರ ಗ್ರೇಡ್-2 ತಹಶೀಲ್ದಾರರು, ಶಿರಸ್ತೇದಾರಾದ ರವಿಕುಮಾರ ನಾಯಕವಾಡಿ, ಮೈಬೂಬಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ್ ,ಮಹೇಶ್ ದಲಾಲ, ಹಾಲೇಶ್, ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ ,ಮಂಜುನಾಥ , ಸುಧಾ, ಶ್ರಿರಾಮ ಜೋಶಿ,ಹನುಮೇಶ ಪೂಜಾರ ಹಾಗೂ ಸಾಣಾಪೂರ ಪಿ ಕೆ ಜಿ ಬಿ ಬ್ಯಾಂಕ್ ಸಿಬ್ಬಂದಿಗಳಾದ ಸುನಿಲ್ , ರಾಜಶೇಖರ್, ಪೋಲಿಸ್ ಸಿಬ್ಬಂದಿ , ಹಾಗೂ ಹರಿಶ್ರಿನಿವಾಸ ಮಹಿಳಾ ಸೇವಾ ಮಂಡಳಿ ಪಗಡದಿನ್ನಿ ಕ್ಯಾಂಪ್, ಮತ್ತು ಪ್ರವಾಸಿ ಮಿತ್ರ ಹನುಮಂತಪ್ಪ, ಬೇನಾಳಪ್ಪ ಸಿಬ್ಬಂದಿಗಳು ಹಾಗೂ ವೆಂಕಟೇಶ ದೇವಸ್ಥಾನದ ಸಿಬ್ಬಂದಿ ವರ್ಗ ಹಾಗೂ ಭಕ್ತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next