Advertisement

ವಂಚನೆ ಎಸಗಿದ ಆರೋಪ : ಬಿಜೆಪಿಯ ಕಿರಿಟ್‌, ಪುತ್ರನ ವಿರುದ್ಧ ಕೇಸು

11:33 PM Apr 07, 2022 | Team Udayavani |

ಮುಂಬಯಿ: ಈಶಾನ್ಯ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ, ಬಿಜೆಪಿ ನಾಯಕ ಕಿರಿಟ್‌ ಸೋಮಯ್ಯ ಮತ್ತು ಅವರ ಪುತ್ರ ನೀಲ್‌ ವಿರುದ್ಧ ವಂಚನೆ ಎಸಗಿದ ಆರೋಪ ಹೊರಿಸಲಾಗಿದೆ ಮತ್ತು ಕೇಸು ದಾಖಲಿಸಲಾಗಿದೆ.

Advertisement

ಸದ್ಯ ಧ್ವಂಸಗೊಂಡಿರುವ ಯುದ್ಧನೌಕೆ ಐಎನ್‌ಎಸ್‌ ವಿಕ್ರಾಂತ್‌ ಅನ್ನು ರಕ್ಷಿಸುವುದ ಕ್ಕೋಸ್ಕ ರವಾಗಿ ಸಂಗ್ರಹವಾಗಿದ್ದ 57 ಕೋಟಿ ರೂ. ಮೊತ್ತ ವನ್ನು ದುರುಪಯೋಗ ಮಾಡಿದ ಆರೋಪವನ್ನು ಬಿಜೆಪಿ ಸಂಸದ ಮತ್ತು ಅವರ ಪುತ್ರನ ಮೇಲೆ ಹೊರಿಸಲಾಗಿದೆ. ಈ ಬಗ್ಗೆ ಸೇನೆಯ ನಿವೃತ್ತ ಅಧಿಕಾರಿಯೊಬ್ಬರು ಮುಂಬ ಯಿಯ ಟ್ರಾಂಬೆ ಪೊಲೀಸ್‌ ಠಾಣೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಕೇಸು ದಾಖಲಿ ಸಲಾಗಿದೆ. ಶಿವಸೇನೆ ಸೋಮಿಯ ವಿರುದ್ಧ ಪ್ರತಿಭಟನೆ ನಡೆಸಿದೆ.

ಬಾಂಗ್ಲಾದೇಶ ವಿಮೋಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಯುದ್ಧನೌಕೆ ಐಎನ್‌ಎಸ್‌ ವಿಕ್ರಾಂತ್‌ ಅನ್ನು 1997ರಲ್ಲಿ ಸೇವೆಯಿಂದ ಮುಕ್ತಗೊಳಿಸಲಾಗಿತ್ತು. ಅದನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಬೇಕು ಎಂದು ಒತ್ತಾಯವಿದ್ದರೂ 2014ರಲ್ಲಿ ಅದನ್ನು ಹರಾಜು ಹಾಕಲಾಯಿತು. 2021ರ ನವೆಂಬರ್‌ನಲ್ಲಿ ಅದನ್ನು ಒಡೆದು ಹಾಕಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next