ಸೋಲ್: ದೇಶದಲ್ಲಿ ಕೋವಿಡ್ ಹಾಗೂ ಚಂಡಮಾರುತದ ಪರಿಣಾಮ ಆಹಾರ ಕೊರತೆಯಾಗುವ ಸಾಧ್ಯತೆ ಇದ್ದಿರುವುದಾಗಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೋಂಗ್ ಉನ್ ಎಚ್ಚರಿಕೆ ನೀಡಿದ್ದು, ಕೋವಿಡ್ 19 ನಿರ್ಬಂಧವನ್ನು ಮುಂದುವರಿಸಲು ಜನರು ಸಹಕಾರ ನೀಡಬೇಕು ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಲಕ್ಷಾಂತರ ರೂ.ಮೌಲ್ಯದ ನಕಲಿ ರಸಗೊಬ್ಬರ ಸಾಗಾಣಿಕೆ: ಪೊಲೀಸರು-ಅಧಿಕಾರಿಗಳ ದಾಳಿ
ಪ್ರಸ್ತುತ ಅಂತಾರಾಷ್ಟ್ರೀಯ ಸನ್ನಿವೇಶವನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಉತ್ತರ ಕೊರಿಯಾ ಚರ್ಚೆ ನಡೆಸಬೇಕಾಗಿದೆ ಎಂದು ಕರೆ ನೀಡಿರುವ ಕಿಮ್, ಅಮೆರಿಕವಾಗಲಿ ಅಥವಾ ದಕ್ಷಿಣ ಕೊರಿಯಾದ ಬಗ್ಗೆ ನಿರ್ದಿಷ್ಟವಾಗಿ ಉಲ್ಲೇಖಿಸದೇ ಮಾತನಾಡಿರುವುದಾಗಿ ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಕೋವಿಡ್ ಸೋಂಕಿನ ಪರಿಣಾಮ ದೇಶದ ಗಡಿ ಭಾಗಗಳನ್ನು ಮುಚ್ಚಿದ್ದರಿಂದ ಉತ್ತರ ಕೊರಿಯಾ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಅಲ್ಲದೇ ಚೀನಾದ ಜತೆಗಿನ ವ್ಯಾಪಾರ ಒಪ್ಪಂದ ಕಡಿದುಕೊಂಡಿದ್ದು, ಮತ್ತೊಂದೆಡೆ ಭೀಕರ ಚಂಡಮಾರುತ ಪ್ರವಾಹದಿಂದ ಬೆಳೆ ನಾಶವಾಗಿರುವುದಾಗಿ ವರದಿ ತಿಳಿಸಿದೆ.
ಕಿಮ್ ಉತ್ತರ ಕೊರಿಯಾದ ಆಡಳಿತಾರೂಢ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾದ ಕೇಂದ್ರ ಸಮಿತಿಯ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ಆಹಾರದ ಕೊರತೆ/ಅಸ್ಥಿರತೆ ಸಂಭವಿಸಲಿದೆ. ಭೀಕರ ಚಂಡಮಾರುತದಿಂದಾಗಿ ಬೆಳೆಗಳು ನಾಶವಾಗಿರುವುದಾಗಿ ತಿಳಿಸಿದ್ದಾರೆ.