Advertisement

ಪಾಕ್‌ನಲ್ಲಿ ಹಿಂದೂ ಯುವಕನ ಹತ್ಯೆ

12:53 AM May 05, 2023 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನ‌ದ ಸಿಂಧ್‌ ಪ್ರಾಂತದಲ್ಲಿ ಅಲ್ಪಸಂಖ್ಯಾಕ ಹಿಂದೂ ಯುವಕನನ್ನು ವಿನಾಕಾರಣ ಎನ್‌ಕೌಂಟರ್‌ ಮಾಡಿರುವ ಆರೋಪದ ಮೇರೆಗೆ ಪೊಲೀಸ್‌ ಅಧಿಕಾರಿಯೋ­ರ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Advertisement

ಕಮಲ್‌ ಕಿಶನ್‌ ಎಂಬ ಯುವಕನನ್ನು ಫ‌ರ್ಮಾನ್‌ ಶಾ ಎಂಬ ಅಧಿಕಾರಿ ಕೊಂದಿರುವರೆಂದು ಕಿಶನ್‌ ಅವರ ತಂದೆ ನೀಡಿರುವ ದೂರನ್ನು ಆಧರಿಸಿ ಕೇಸು ದಾಖಲಿಸಲಾಗಿದೆ. ಮಗಳ ಮದುವೆ ನಿಶ್ಚಿಯವಾಗಿದ್ದ ಹಿನ್ನೆಲೆಯಲ್ಲಿ ಸ್ವಯಂಸೇವಾ ಸಮಿತಿಯಿಂದ ಹಣತರಲೆಂದು ತಮ್ಮ ಪುತ್ರ ಕಿಶನ್‌ ಆತನ ಸ್ನೇಹಿತ ಅನಿಲ್‌ ಜತೆಗೆ ತೆರಳಿದ್ದ. ಆತ ಮರಳಿಬರುವಾಗ ಪೊಲೀಸರು ಎದುರಾಗಿದ್ದು, ಮದುವೆಗೆಂದು ತರುತ್ತಿದ್ದ 80 ಸಾವಿರ ರೂ. ಕಸಿದು­ಕೊಂಡಿ­ದ್ದಾರೆ. ಕಿಶನ್‌ನನ್ನು ಎನ್‌ಕೌಂಟರ್‌ ಮಾಡಿದ್ದಾರೆಂದು ಕಿಶನ್‌ ತಂದೆ ಆರೋಪಿಸಿದ್ದಾರೆ.

ಪಾಕ್‌ನಲ್ಲಿ 7 ಶಿಕ್ಷಕರ ಹತ್ಯೆ: ಪಾಕಿಸ್ಥಾನ‌ದ ಖೈಬರ್‌ ಪಖು¤ಂಖÌ ಪ್ರಾಂತದ ಶಾಲೆಯೊಂದರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, 7 ಶಿಕ್ಷಕರು ಮೃತರಾಗಿರುವ ಘಟನೆ ವರದಿಯಾಗಿದೆ. ಕರಾಮ್‌ ಜಿಲ್ಲೆಯ ಸರಕಾರಿ ಪ್ರೌಢಶಾಲೆಗೆ ಮುಸುಕುಧಾರಿ ವ್ಯಕ್ತಿಯೊಬ್ಬ ಏಕಾಏಕಿ ನುಗ್ಗಿ, ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಶಿಕ್ಷಕರು ಪರೀಕ್ಷೆ ಸಿದ್ಧತೆಗಳನ್ನು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next